ಪ್ರಗತಿ ರಥಕ್ಕೆ ಚಾಲನೆ ನೀಡಿದ ಶಾಸಕ ಎಸ್ ಎ ರವೀಂದ್ರನಾಥ್

ಪ್ರಗತಿ ರಥಕ್ಕೆ ಚಾಲನೆ ನೀಡಿದ ಶಾಸಕ ಎಸ್ ಎ ರವೀಂದ್ರನಾಥ್

ದಾವಣಗೆರೆ: ದಾವಣಗೆರೆಯ ಉತ್ತರ ವಿಧಾನಸಭಾ ಕ್ಷೇತ್ರದ 22ನೇ ವಾರ್ಡಿನ ಎಲ್ಲಮ್ಮ ನಗರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಸ್ತುತಪಡಿಸುವ ಪ್ರಗತಿ ರಥಕ್ಕೆ ಶಾಸಕರಾದ ಸನ್ಮಾನ್ಯ ಶ್ರೀ ಎಸ್. ಎ. ರವೀಂದ್ರನಾಥ್ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ 22ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಆರ್ ಶಿವಾನಂದ್, ಗಣೇಶಪ್ಪ, ಮಂಡಲ ಅಧ್ಯಕ್ಷರಾದ ಸಂಗನಗೌಡ್ರು, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಹಾಗೂ ಬಸವರಾಜಯ್ಯ, ದಾವಣಗೆರೆ ಉತ್ತರದ ಚುನಾವಣಾ ಪ್ರಭಾರಿಗಳಾದ ಶಿವಕುಮಾರ್ ಎಚ್ ಎನ್, ವಕೀಲರ ಪ್ರಕೋಷ್ಠದ ಪ್ರಮುಖರಾದ ದಿವಾಕರ್, 15 ವಾರ್ಡಿನ ಬಿಜೆಪಿ ಪ್ರಮುಖರಾದ ಶ್ರೀಮತಿ ಶಾರದ ರಾಯ್ಕರ್, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಲೋಕಿಕೆರೆ ನಾಗರಾಜ್, ವಾರ್ಡಿನ ಪ್ರಮುಖರಾದ ರುದ್ರೇಶ್, ಮಂಜುನಾಥ್ ಸಂಗೀತ್, ಅಡಾಣಿ ಸಿದ್ದಣ್ಣ, ಲಕ್ಷ್ಮಿಕಾಂತ್ ವೆರ್ಣೆಕರ್, ಯಲ್ಲೇಶ್, ಕೃಷ್ಣ ನಾಯಕ್, ಗುಡ್ಡಪ್ಪ, ಹನುಮಂತ ಸುರ್ವೆ, ಉತ್ತರ ಯುವ ಮೋರ್ಚಾದ ಅಧ್ಯಕ್ಷರಾದ ಸಚಿನ್ ವೆರ್ಣೇಕರ್, ಪದಾಧಿಕಾರಿಗಳಾದ ಚಂದ್ರು, ಕಿರಣ್, ಕಿಶೋರ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!