ನಿರಾಶ್ರಿತರ ಕೇಂದ್ರದ ಎಫ್ ಡಿ ಎ ನಳಿನಾ ಮೇಡಮ್ ಅಮಾನತು ಮಾಡಿದ ಡಿಸಿ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದ ಬಳಿಯಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಪ್ರಥಮ ದರ್ಜೆ ಸಹಾಯಕಿ ಹಾಗೂ ಕೆ.ನಳನಾ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಡಿಸಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.

ನಿರಾಶ್ರಿತರ ಕೇಂದ್ರದಲ್ಲಿ ಆಹಾರ ತಯಾರಿಸಲು ಸರಿಯಾದ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳನ್ನು ಅಡುಗೆಯವರಿಗೆ ಸರಿಯಾದ ರೀತಿಯಲ್ಲಿ ವಿತರಿಸುವುದಿಲ್ಲ, ಹಾಗೂ ಹಲವಾರು ದಿನಗಳಿಂದ ಆಹಾರ ತಯಾರಿಕೆಗೆ ಒಂದೇ ಬಗೆಯ ತರಕಾರಿ ಬಳಸುತ್ತಿದ್ದಾರೆ ಎಂಬ ಆರೋಪಗಳಿದ್ದವು, ಹಸುವಿನ ಹಾಲನ್ನು ಅಕ್ರಮವಾಗಿ ಹೊರಗೆ ಮಾರಾಟ ಮಾಡುತ್ತಿರುವುದು ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ಬೆಳೆಯುವ ತರಕಾರಿಗಳಿಂದ ಬರುವ ಆದಾಯವನ್ನು ಪೂರ್ಣ ಪ್ರಮಾಣದಲ್ಲಿ ಜಮೆ ಮಾಡದೆ ದುರುಪಯೋಗ ಮಾಡಿಕೊಳ್ಳುವ ಮೂಲಕ ಅಕ್ರಮ ನಡೆಸುತ್ತಿದ್ದರು ಎಂಬ ದೂರುಗಳು ಸಲ್ಲಿಕೆಯಾಗಿದ್ದವು.

ಮಹಾಂತೇಶ್ ಬೀಳಗಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದಾಗ ಆರೋಪಗಳು ಸಾಬೀತಾಗಿವೆ. ಹಾಗಾಗಿ ಪ್ರಥಮ ದರ್ಜೆ ಸಹಾಯಕ ಕೆ. ನಳಿನಾ ರನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!