ಸ್ಯಾಂಟ್ರೋ ರವಿ ಬಂಧಿಸಿ ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್

ಮಂಡ್ಯ: ಎಡಿಜಿಪಿ ಅಲೋಕ್‌ ಕುಮಾರ್‌ ಶನಿವಾರ ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂನ ನಿಮಿಷಾಂಬಾ ದೇವಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೊ ರವಿ ಬಂಧನಕ್ಕಾಗಿ ನಾನು ನಿಮಿಷಾಂಬಾ ದೇವಿಯಲ್ಲಿ ಹರಕೆ ಹೊತ್ತಿದ್ದೆ, ಆರೋಪಿಯನ್ನು ಬಂಧಿಸಲಾಗಿದ್ದು ಈಗ ಹರಕೆ ತೀರಿಸಲು ಬಂದಿದ್ದೇನೆ ಎಂದು ಹೇಳಿದರು.

12 ವರ್ಷಗಳಿಂದ ನಾನು ದೇವಿಯನ್ನು ಅಪಾರವಾಗಿ ನಂಬುತ್ತೇನೆ ಎಂದು ಹೇಳಿದ ಅಲೋಕ್ ಕುಮಾರ್, ಸ್ಯಾಂಟ್ರೋ ರವಿ ಬಂಧನಕ್ಕೆ ಹೆಚ್ಚು ಒತ್ತಡವಿತ್ತು. ಬಂಧಿಸದಿದ್ದರೆ ಪೊಲೀಸ್‌ ಇಲಾಖೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿತ್ತು. ನಾಲ್ಕು ದಿನಗಳ ಹಿಂದೆ ದೇವಾಲಯಕ್ಕೆ ಬಂದದ್ದ ನಾನು ಅಪಪ್ರಚಾರ ಹೋಗಬೇಕು, ಆರೋಪಿ ಬೇಗ ಸಿಗಬೇಕು ಎಂದು ನಿಮಿಷಾಂಬಾ ದೇವಿಯಲ್ಲಿ ಬೇಡಿಕೊಂಡಿದ್ದೆ. ಆರೋಪಿ ಸಿಕ್ಕಿದ್ದು ದೇವಿಗೆ ಧನ್ಯವಾದ ಹೇಳಲು ಬಂದಿದ್ದೇನೆ’ ಎಂದರು.

‘2011ರಲ್ಲಿ ಹುಣಸೂರಿನಲ್ಲಿ ಜೋಡಿ ಕೊಲೆಯಾದಾಗ ನಾನು ಹರಕೆ ಮಾಡಿಕೊಂಡ 5 ತಾಸಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ದೇವಾಲಯದಿಂದ ಮೈಸೂರು ತಲುಪುವಷ್ಟರಲ್ಲಿ ಆರೋಪಿಗಳ ಬಂಧನವಾಗಿತ್ತು. ನಿಮಿಷಾಂಬಾ ದೇವಿಯನ್ನು ಅಪಾರ ಜನ ನಂಬುತ್ತಾರೆ, ನಾನು ಕೂಡ ನಂಬಿಕೆ ಇಟ್ಟಕೊಂಡು ಆರಾಧಿಸುತ್ತೇನೆ’ ಎಂದರು.

Leave a Reply

Your email address will not be published. Required fields are marked *

error: Content is protected !!