ಬಂಟ್ವಾಳ: ಸರಕಾರಿ ಇಲಾಖೆಯ ವಾಹನ ಡಿಕ್ಕಿ ಪಾದಚಾರಿ ಮೃತ್ಯು: ಅಪಘಾತ ಸಂಭವಿಸಿದ ಕೂಡಲೇ ವಾಹನ ಚಾಲಕ ಸ್ಥಳದಿಂದ ಪರಾರಿ: ಇಲಾಖಾ ವಾಹನದಲ್ಲಿ ಲಕ್ಷಾಂತರ ರೂ ಹಣ ಇದ್ದ ಬಗ್ಗೆ ಶಂಕೆ…!

ಸರಕಾರಿ ಇಲಾಖೆ

ಬಂಟ್ವಾಳ: ಸರಕಾರಿ ಇಲಾಖೆಗೆ ಸೇರಿದ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆ ಬಳಿ ನಡೆದಿದೆ.

ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪುತ್ತೂರು ಅರಣ್ಯ ಇಲಾಖೆಯ ಆರ್.ಎಫ್.ಓ ಸಂಚಾರ ಮಾಡುತ್ತಿದ್ದ ಬೊಲೆರೋ ವಾಹನ ಪರಂಗಿಪೇಟೆಯ ರಿಕ್ಷಾ ಪಾರ್ಕ್ ನ ಎದುರು ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷಾಂತರ ರೂ ಹಣದ ಕಟ್ಟು ಇಲಾಖಾ ವಾಹನದಲ್ಲಿ

ಅರಣ್ಯ ಇಲಾಖೆಯ ವಾಹನ ಅಪಘಾತ ಸಂಭವಿಸಿದ ಕೂಡಲೇ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ರಕ್ತಸಿಕ್ತವಾಗಿ ಒದ್ದಾಡುತ್ತಿದ್ದಾತನನ್ನು ಅಲ್ಲೇ ಇದ್ದ
ರಿಕ್ಷಾ ಚಾಲಕರಿಬ್ಬರು ಅದೇ ಸರಕಾರಿ ಇಲಾಖೆಯ ವಾಹನದಲ್ಲಿ ಹಾಕಿಕೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಾಚಾರಿಯನ್ನು ಬದುಕಿಸುವ ಪ್ರಯತ್ನ ಫಲನೀಡಲಿಲ್ಲ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅನಾಮಿಕನ ಜೀವ ಉಳಿಸುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳಿಬ್ಬರು ಸರಕಾರಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ವಾಪಾಸು ಬರುತ್ತಿದ್ದ ವೇಳೆ ವಳಚ್ಚಿಲ್‌ ಎಂಬಲ್ಲಿಗೆ ಇಲಾಖೆಯ ಚಾಲಕ ಆಗಮಿಸಿ ವಾಹನದೊಳಗಿದ್ದ ಕಡತಗಳನ್ನು ಪಡೆದುಕೊಂಡು ಹೋಗಿದ್ದಾರೆ. ಆದರೆ ಈ ಇಲಾಖಾ ವಾಹನದಲ್ಲಿ ಲಕ್ಷಾಂತರ ರೂ ಹಣದ ಕಂತೆ ಇತ್ತು ಎಂದು ಹೇಳಲಾಗಿದೆ.

ಚಾಲಕನ ಸೀಟಿನ ಬಳಿಯಲ್ಲಿ ಇತ್ತು ಎನ್ನಲಾಗಿರುವ ಹಣದ ಕಂತೆಯನ್ನು ವಳಚ್ಚಿಲ್ ನಿಂದ ಎಸ್ಕೇಪ್ ಮಾಡಲಾಗಿದೆಯೆ? ಹೀಗೊಂದು ಸಂಶಯ ಇದೀಗ ಸ್ಥಳೀಯವಾಗಿ ಉಂಟಾಗಿದ್ದು, ಇಷ್ಟೊಂದು ಹಣವನ್ನು ಇಲಾಖಾ ವಾಹನದಲ್ಲಿ ರಾತ್ರಿ ವೇಳೆ ಎಲ್ಲಿಗೆ ಕೊಂಡು ಹೋಗಲಾಗುತ್ತಿತ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ ನಿಜವಾಗಿಯೂ ಅದರಲ್ಲಿ ಹಣದ ಕಂತೆಯಿತ್ತಾ? ಅಥವಾ ಗಾಳಿಸುದ್ದಿಯಾ ಎಂಬುದನ್ನು ಮೇಲಾಧಿಕಾರಿಗಳ ತನಿಖೆಯ ಬಳಿಕವಷ್ಟೇ ತಿಳಿಯಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!