ನಾಮಪತ್ರ ಸಲ್ಲಿಕೆಯ ಕೊನೆದಿನ 20 ನಾಮಪತ್ರಗಳೊಂದಿಗೆ 54 ನಾಮಪತ್ರ ಸಲ್ಲಿಕೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಏಪ್ರಿಲ್ 19 ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.


ನಾಮಪತ್ರ ಸಲ್ಲಿಸಿದವರ ವಿವರ; ಬಿಜೆಪಿಯಿಂದ ಜಿ.ಎಸ್.ಗಾಯಿತ್ರಿ 3 ನಾಮಪತ್ರ, ಜಿ.ಎಂ.ಸಿದ್ದೇಶ್ವರ ಬಿಜೆಪಿ 3 ನಾಮಪತ್ರ, ದೊಡ್ಡೇಶಿ ಹೆಚ್.ಎಸ್ ಜನಹಿತ ಪಕ್ಷ, ತಿಪ್ಪೇಸ್ವಾಮಿ ಕೆ.ಎ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ 2 ನಾಮಪತ್ರ, ಶ್ರೀನಿವಾಸ್ ಎಂ.ಸಿ. ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ಕೆಆರ್‍ಎಸ್ ಪಕ್ಷದಿಂದ ಕೆ.ಎಸ್.ವೀರಭದ್ರಪ್ಪ ಉಳಿದಂತೆ ಎಲ್ಲಾ ಪಕ್ಷೇತರರಾಗಿದ್ದು ವಿನಯ್‍ಕುಮಾರ್ ಜಿ.ಬಿ ಎರಡು ನಾಮಪತ್ರ, ಪೆದ್ದಪ್ಪ ಎಸ್, ಇರ್ಪಾನುಲ್ಲಾ,  ಪ್ರಸನ್ನ ಬಿ.ಆರ್, ಮೆಹಬೂಬ ಪಾಷ, ಬರ್ಕತ್ ಅಲಿಭಾಷ, ಗಾಯಿತ್ರಿ ಜಿ.ಎಂ.ಕೋಂ ಸಿದ್ದೇಶಿ, ಕರಣಂ ಕೊಟ್ರಪ್ಪ ನಾಮಪತ್ರ ಸಲ್ಲಿಸಿದವರು. ಇದುವರೆಗೆ ಒಟ್ಟು 29 ಅಭ್ಯರ್ಥಿಗಳಿಂದ 34 ನಾಮಪತ್ರಗಳು ಸಲ್ಲಿಕೆಯಾಗಿದೆ.


ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ.18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಹಾಗೂ ಕೊನೆ ದಿನ ಏ.19 ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ.
ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದವರು; ಕಾಂಗ್ರೆಸ್‍ನಿಂದ ಡಾ; ಪ್ರಭಾ ಮಲ್ಲಿಕಾರ್ಜುನ್ ನಾಲ್ಕು ನಾಮಪತ್ರ, ಬಿಜೆಪಿಯಿಂದ ಜಿ.ಎಸ್.ಗಾಯಿತ್ರಿ 4, ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ 3, ಕೆಆರ್‍ಎಸ್ ಪಕ್ಷದ ರಾಘವೇಂದ್ರ ಜಿ.ಪಿ 2, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ ತಿಪ್ಪೇಸ್ವಾಮಿ ಕೆ.ಎ 3 ನಾಮಪತ್ರ, ಪಕ್ಷೇತರರಾಗಿ ವಿನಯ್‍ಕುಮಾರ್ ಜಿ.ಬಿ. 4 ನಾಮಪತ್ರ ಸಲ್ಲಿಸಿದ್ದಾರೆ.

ಜನಹಿತ ಪಕ್ಷದ ದೊಡ್ಡೇಶಿ ಹೆಚ್.ಎಸ್ ಇವರು ಠೇವಣಿ ಹಣ ಭರಿಸಲು ರೂ.10 ಮುಖಬೆಲೆಯ ನಾಣ್ಯಗಳನ್ನು ತಂದಿದ್ದರು.
ನಾಮಪತ್ರಗಳ ಪರಿಶೀಲನೆ; ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಗೆ ಏಪ್ರಿಲ್ 20 ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!