ಕೆಂಗಾಪುರಕ್ಕೆ ಸಾರಿಗೆ ಬಸ್ ಸೌಲಭ್ಯ : ಗ್ರಾಮಸ್ಥರಲ್ಲಿ ಸಂತಸ

ದಾವಣಗೆರೆ : ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕೆಂಗಾಪುರ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯದಿಂದ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಕೆಂಗಾಪುರ ಗ್ರಾಮದಲ್ಲಿ ಸಾರಿಗೆ ಬಸ್ ಸೌಲಭ್ಯ ಮರೀಚಿಕೆಯಾಗಿದ್ದು, ಬಸ್ ಕಲ್ಪಿಸುವಂತೆ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಸಾರಿಗೆ ಸಚಿವ ಶ್ರೀರಾಮುಲು ಅವರು ಇದನ್ನರಿತು ಬಸ್ ಸೌಲಭ್ಯ ಕಲ್ಪಿಸಿದ್ದು, ಇದಕ್ಕೆ ತಮ್ಮ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜನರ ಅಹವಾಲಿಗೆ ಸ್ಪಂದಿಸಿರುವ ಕ್ಷೇತ್ರದ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಅವರ ಬೆಂಬಲ ಸಾರಿಗೆ ಬಸ್ ಸಂಚರಿಸುವಂತಾಗಿದೆ ಎಂಬ ಕೃತಜ್ಞತೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಿಂದ ಕಬ್ಬಳ, ಕೆಂಗಾಪುರ, ಕಣವೇ ಬಿಳಚಿ, ಬಸವಾಪಟ್ಟಣ ಮೂಲಕ ಹೊನ್ನಾಳಿ ಮಾರ್ಗಕ್ಕೆ ಈ ಬಸ್ಸು ಸಂಚಾರ ಆರಂಭಿಸಿದ್ದು, ದಿನಕ್ಕೆರಡು ಬಾರಿ ಸಂಚರಿಸಲಿದೆ ಎಂದು ಜಿ.ಎಸ್. ಶ್ಯಾಮ್ ತಿಳಿಸಿದರು.

ಕೆಂಗಾಪುರದ ಶ್ರೀರಾಮುಲು ಅಭಿಮಾನಿ ಯುವ ಪಡೆಯ ಕಾಂತರಾಜ್, ಶ್ರೀನಿವಾಸ್, ಹನುಮಂತು, ಹಾಲೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರಪ್ಪ ಮತ್ತು ರಾಜಪ್ಪ ಹಾಗೂ ಎಲ್ಲ ಗ್ರಾಮಸ್ಥರು, ಜಿ.ಎಸ್. ಶ್ಯಾಮ್ ಅವರುಗಳು ಶ್ರೀರಾಮುಲು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!