ದಾವಣಗೆರೆಗೆ ವರುಣನ ಕೃಪೆ, ಮುಂದಿನ 3 ಗಂಟೆಗಳಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಮೂನ್ಸೂಚನೆ.

ದಾವಣಗೆರೆ:  ಬಿಸಿಲಿನ ಧಗೆ, ನೀರಿನ ಅಭಾವ, ಬಾಡುತ್ತಿರುವ ತೋಟ, ಮುಗಿಲು ನೋಡುತ್ತಿದ್ದ ನೇಗಿಲ ಯೋಗಿಗೆ ಇಂದು ತಂಪೆರದ ವರುಣರಾಯ ಎಲ್ಲರಲ್ಲಿ ಆನಂದ ಬಾಷ್ಪ ತರುವ ಮೂಲಕ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇನ್ನಷ್ಟು ಸಂತೋಷ ತರುವ ನಿಟ್ಟಿನಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಹವಾಮಾನ ಇಲಾಖೆ ಮುನ್ಸೂಚನೆಯನ್ವಯ ಮುಂದಿನ ಮೂರು ಗಂಟೆಗಳಲ್ಲಿ ದಾವಣಗೆರೆ ಸೇರಿದಂತೆ ಗದಗ, ಕೊಪ್ಪಳದ ಕೆಲವೆಡೆ ಹಾಗೂ ಬಳ್ಳಾರಿಯಲ್ಲಿ ಮೇಲ್ಮೈ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಮೂನ್ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!