bear attack; ಕರಡಿಗಳ ದಾಳಿ, ಯುವಕ ಗಂಭೀರ ಗಾಯ
![](https://garudavoice.com/wp-content/uploads/2023/10/bear-attack-1024x461.jpg)
ವಿಜಯನಗರ, ಅ,17: ಜಮೀನಿಗೆ ನೀರು ಹಾಯಿಸಲು ಹೋದ ಯುವಕ ಮನೆಗೆ ವಾಪಸ್ಸು ಬರುವಷ್ಟರಲ್ಲಿ ಕರಡಿಗಳ ದಾಳಿಗೆ (bear attack) ಸಿಲುಕಿ ಗಾಯಗೊಂಡ ಘಟನೆ ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಂಗಾಪುರ ಗ್ರಾಮದ 28 ವರ್ಷದ ಯುವಕ ಆನಂದ ಎಂಬುವಾತ ಕೆ.ಕಲ್ಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದನು. ಮುಂಜಾನೆ ಎಂದಿನಂತೆ ಜಮೀನಿಗೆ ನೀರು ಹಾಯಿಸಲು ಹೋದ ಆತ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತ ಎರಡು ಕರಡಿಗಳು ದಾಳಿ ನಡೆಸಿದೆ.
health; ಎಸ್ಎಸ್ ಕೇರ್ ಟ್ರಸ್ಟ್ ಉತ್ತಮ ಗುಣಮಟ್ಟ ಆರೋಗ್ಯ ಸೇವೆ ತಲುಪಿಸಲು ಬದ್ಧ
ದಾಳಿಯಲ್ಲಿ ಆನಂದನ ಮುಖ ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಗ್ರಾಮಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.