gb vinay; ಜನಸಾಮಾನ್ಯರ ಅಭಿವೃದ್ಧಿಗೆ ಸ್ಪಂದಿಸುವವರು ಬೇಕು: ಇನ್ ಸೈಟ್ಸ್ ವಿನಯ್
![](https://garudavoice.com/wp-content/uploads/2023/10/gb-vinay.jpg)
ದಾವಣಗೆರೆ, ಅ.17: ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ಅರ್ಥಪೂರ್ಣ ವಾಗಿ ನಡೆಯುತ್ತಿರುವುದು ಸಂತಸದ ವಿಷಯ ಇದೇ ರೀತಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಮುಂದಾಗಬೇಕಾಗಿದೆ ಎಂದು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ (gb vinay) ಕಿವಿಮಾತು ಹೇಳಿದರು.
ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ಶ್ರೀ ಬೀರಲೀಂಗೇಶ್ವರ ದೇವಸ್ಥಾನದ ಕಳಸರೋಹಣದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನೆಯಲ್ಲಿ ಒಬ್ಬಅಧಿಕಾರಿ ಇದ್ದರೆ ಅವರ ಕುಟುಂಬದ ನಿರ್ವಹಣೆ ಸುಗಮವಾಗಿ ನಡೆಯಲಿದೆ ಅದೇ ರೀತಿಯಾಗಿ ನಾನು ಮನೆಗೊಬ್ಬ ಅಧಿಕಾರಿಗಳನ್ನು ನೀಡಬೇಕೆಂಬ ಮಹದಾಸೆಯಿಂದ ನಾನು ಇನ್ಸೈಟ್ ಐಎಎಸ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಸಾವಿರಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಮಟ್ಟದ ಅಧಿಕಾರಿಗಳು ಆಗಿದ್ದಾರೆ, ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕಾಗಿದೆ ಎಂದರು.
suicide; ಮಕ್ಕಳ ಮೇಲೆ ಹಲ್ಲೆ ನಡೆಸಿ ತಾಯಿ ಆತ್ಮಹತ್ಯೆ
ಜನಸಾಮಾನ್ಯರ ಕೈಗೆ ಸಿಗುವಂತ ಜನಪ್ರತಿನಿಧಿಗಳ ಅವಶ್ಯಕತೆ ಇದೆ ಹಾಗೆ ರಾಜಕೀಯದ ಇಚ್ಛಾಶಕ್ತಿ ಇರುವಂತಹವರು ಮತ್ತೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಅಭಿವೃದ್ಧಿ ಮಾಡುವಂತಹ ಪ್ರಜ್ಞಾವಂತ ರಾಜಕೀಯ ಪ್ರತಿನಿಧಿ ಬೇಕಾಗಿದೆ ಮುಂದೆ ನಾನು ಕೂಡ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದು ನಿಮ್ಮ ಪ್ರೀತಿ ವಿಶ್ವಾಸ ಬೇಕಾಗಿದೆ ಎಂದರು.
ನಂತರ ಕುಣೆಬೆಳಕೆರೆ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕಳಸರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಬೀರಪ್ಪನ ದರ್ಶನ ಪಡೆದು ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಲವು ಸಾಮಾಜಿಕ ಸೇವಾ ನಿರತನಾಗಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿರುವುದಾಗಿ ತಿಳಿಸಿ ಮುಂಬರುವ ದಿನಗಳಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಕೈಗೆ ಸಿಗುವಂತಹ ಸಂಸದನಾಗಿ ನಿಮ್ಮ ಜೊತೆ ಇದ್ದು ಸೇವೆ ಮಾಡುವೆ ಎಂದ ವಿನಯ್ ಕುಮಾರ್ರವರು ಬೀರಪ್ಪನ ಸನ್ನಿದಾನದಲ್ಲಿ ಭರವಸೆ ನೀಡಿ ದೂರದ ಊರುಗಳಿಂದ ಬಂದ ಭಕ್ತರ ಜೊತೆ ಪ್ರಸಾರ ಸವಿದು ಪುನೀತ ಭಾವನೆ ವ್ಯಕ್ತಪಡಿಸಿದರು. ಗ್ರಾಮದ ಹಿರಿಯರು ಯುವಜನರು ಮುಖಂಡರು ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.