ಚೈತ್ರಾ ಕುಂದಾಪುರ್ ಗ್ಯಾಂಗ್ ಪುಂಡಾಟ: ಸಾಕ್ಷಿ ಹೇಳದಂತೆ ಸಲೂನ್ ಮಾಲೀಕನ ಮೇಲೆ ಹಲ್ಲೆ ಆರೋಪ -ಚಿಕ್ಕಮಗಳೂರು SPಗೆ ದೂರು..
![](https://garudavoice.com/wp-content/uploads/2024/03/ch.jpg)
ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನಲ್ಲಿ ಹೊರಗಿರುವ ಪ್ರಕರಣದ ಪ್ರಮುಖ ಆರೋಪಿ ಧನರಾಜ್, ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ, ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದೆ.
ರಾಮು ಈ ಬಗ್ಗೆ ಬೀರೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಹಲ್ಲೆ, ಗಾಯದ ಬಗ್ಗೆ ವೈದ್ಯಕೀಯ ವರದಿ ಇದ್ದರೂ ಬೀರೂರು ಠಾಣೆಯ ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಲ್ಲ. ಈ ಹಿನ್ನೆಲೆ ನ್ಯಾಯಕ್ಕಾಗಿ ರಾಮು ಕುಟುಂಬ ಎಸ್ಪಿ ಕಚೇರಿ ಮೊರೆ ಹೋಗಿದ್ದಾರೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಕಡೂರಿನ ರಾಮು ಸಲೂನ್ನಲ್ಲಿ ಚೈತ್ರಾ ಗ್ಯಾಂಗ್ ನಕಲಿ ಪ್ರಚಾರಕನನ್ನು ಸೃಷ್ಟಿಸಿ, ಚೆನ್ನಾ ನಾಯ್ಕಗೆ ಧನರಾಜ್ ಮೇಕಪ್ ಮಾಡಿಸಿದ್ದ. ಈ ಹಿನ್ನೆಲೆಯಲ್ಲಿ ರಾಮು ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾರೆ. ಆದ್ದರಿಂದಲೇ ಧನರಾಜ್ ರಾಮುವಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ.
ಪ್ರಕರಣ ದಾಖಲಿಸದ ಬೀರೂರು ಪೊಲೀಸರ ವಿರುದ್ಧ ರಾಮು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಅಪರಾಧ ನಡೆದ ಸ್ಥಳದಿಂದ ಹೊರಡುವ ಮೊದಲು, ಅವರು ತಮ್ಮ ಮತ್ತು ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸತ್ಯವನ್ನು ಹೇಳಿದರೆ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಧನರಾಜ್ ರಾಮುರವರ ಹೇರ್ ಕಟಿಂಗ್ ಸಲೂನ್ ಬಳಿ 3 ಬಾರಿ ಬಂದು ನ್ಯಾಯಾಲಯಕ್ಕೆ ಸಾಕ್ಷಿ ನೀಡದಂತೆ ಬೆದರಿಕೆ ಹಾಕಿದ್ದನು. ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಅವರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ರಾಮು ವಿರುದ್ಧ ಈ ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.ರಾಮುರವರು , ನನ್ನ ನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ನನಗೆ ರಕ್ಷಣೆ ನೀಡಬೇಕೆಂದು ಚಿಕ್ಕಮಗಳೂರು SPಗೆ ದೂರು ನೀಡಿದ್ದಾರೆ.