ಲೋಕಲ್ ಸುದ್ದಿ

ರಾಜೇಶ್‌ನನ್ನೂ ಸಂಪೂರ್ಣ ತಿರಸ್ಕರಿಸಿ, ದೇವೇಂದ್ರಪ್ಪ ಗೆಲ್ಲಿಸಿ ಜಗಳೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕರೆ

ರಾಜೇಶ್‌ನನ್ನೂ ಸಂಪೂರ್ಣ ತಿರಸ್ಕರಿಸಿ, ದೇವೇಂದ್ರಪ್ಪ ಗೆಲ್ಲಿಸಿ ಜಗಳೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕರೆ

ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಹೆಚ್.ಪಿ. ರಾಜೇಶ್ ಅವರಿಗೆ ನನ್ನ ಯಾವುದೇ ಬೆಂಬಲ ಇಲ್ಲ. ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಕಾಂಗ್ರೆಸ್ ಅಧಿಕೃತ ಅ್ಯರ್ಥಿ ಬಿ.ದೇವೇಂದ್ರಪ್ಪ ಅವರನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇವೇಂದ್ರಪ್ಪ ಅವರಿಗೆ ಮತ ನೀಡಿದರೆ ನನಗೆ ನೀಡಿದಂತೆ ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಡಳಿತ ಬರುವುದು ಸತ್ಯ. ಆ ಮೂಲಕ ಜಗಳೂರಿನ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಸಬ್ ಕಾ ಸಾಥ್ ಸಬ್ ಕ ವಿಕಾಸ್ ಎನ್ನುವ ಹಾಗೂ ಅಚ್ಚೇದಿನ್ ಆಯೇಗ ದಿನಗಳು ಎಲ್ಲಿ ಹೋದವು? ಎಂದು ಪ್ರಧಾನಿ ಹಾಗೂ ಬಿಜೆಪಿ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿದ್ಧರಾಮಯ್ಯ, ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ ಎಂದರು.

ಕಾಂಗ್ರೆಸ್ ಅಭ್ಯರ್ಥಿ ದವಂದ್ರಪ್ಪ, ಕೆಪಿಸಿಸಿ ದಸ್ಯ ಪ್ರಕಾಶ್ ರಾಥೋಡ್, ಕೆ.ಪಿ. ಪಾಲಯ್ಯ, ಹೆಚ್.ಬಿ ಮಂಜಪ್ಪ ಇತರರು ಈ ಸಂದರ್ಭದಲ್ಲಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top