ಕಾಮ್ರೇಡ್ ಕೆ.ಸಿ. ಚನ್ನಬಸಪ್ಪ ನಿಧನಕ್ಕೆ ಸಿಪಿಐ ಜಿಲ್ಲಾ ಮಂಡಳಿ ಸಂತಾಪ
ದಾವಣಗೆರೆ: ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಸದಸ್ಯ ಕಾಂ. ಕೆ.ಸಿ.ಚನ್ನಬಸಪ್ಪ ಅವರ ನಿಧನಕ್ಕೆ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ಸಂತಾಪ ಸೂಚಿಸಿದೆ. ದಾವಣಗೆರೆ ಕೆಟಿಜೆ ನಗರದ 15ನೇ ಕ್ರಾಸ್ನಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ 8-30ಕ್ಕೆ ಹೃದಯಾಘಾತದಿಂದ ನಿಧನರಾದ ಚನ್ನಬಸಪ್ಪ (68) ಅವರು ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಅಗಲಿದ್ದಾರೆ. ನಿವಾಸಕ್ಕೆ ತೆರಳಿ ಮೃತರಿಗೆ ಪುಷ್ಪ ಮಾಲೆ ಹಾಕಿ ಸಂತಾಪ ಸೂಚಿಸಲಾಗಿದೆ.
ಅಂತಿಮ ದರ್ಶನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು, ಜಿಲ್ಲಾ ಖಜಾಂಚಿ ಕಾಂ. ಆನಂದ ರಾಜ್, ಸಹ ಕಾರ್ಯದರ್ಶಿಗಳಾದ ಕಾಂ. ಹೆಚ್.ಜಿ ಉಮೇಶ್, ಆವರಗೆರೆ ವಾಸು, ಪಕ್ಷದ ಮುಖಂಡರುಗಳಾದ ಕಾಂ. ಐರಣಿ ಚಂದ್ರು, ಕಾಂ. ಎನ್.ಹೆಚ್ ರಾಮಣ್ಣ, ಕಾಂ. ಪರಶುರಾಮ್, ಕಾಂ. ಸರೋಜಾ, ಕಾಂ. ರಮೇಶ್ ದಾಸರ್, ಕಾಂ. ನಿಟುವಳ್ಳಿ ಬಸವರಾಜ್, ಕಾಂ. ಏಳುಕೋಟಿ, ಕಾಂ. ಗದಿಗೆಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
garudavoice21@gmail.com 9740365719