ಹದಡಿ ಪೊಲೀಸ್ ಸಿಬ್ಬಂದಿ ಸಸ್ಪೆಂಡ್.! ಕಾರಿನ ವೀಡಿಯೋ ವೈರಲ್ ಹಿಂದಿನ ಕಹನಿ ಬಿಚ್ಚಿಟ್ಟ ದಾವಣಗೆರೆ ಎಸ್.ಪಿ ರಿಷ್ಯಂತ್
![](https://garudavoice.com/wp-content/uploads/2022/06/car-video-viral.jpg)
ದಾವಣಗೆರೆ: ಹದಡಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬುವರು ಗಿರೀಶ್ ಎಂಬುವರನ್ನು ಕಾರಿನ ವಿಚಾರವಾಗಿ ಹೊಡೆಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಕಾರಿನ ವಿಚಾರವಾಗಿ ಪೊಲೀಸ್ ಸಿಬ್ಬಂದಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದರ ಹಿಂದಿನ ಸತ್ಯಸಂಗತಿಗಳನ್ನು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ರಿಷ್ಯಂತ್ ವಿಡಿಯೋ ಮೂಲಕ ತಿಳಿಸಿದ್ದಾರೆ.
ಏನಿದು ಕಾರಿನ ಗಲಾಟೆ ಹಿಂದಿನ ಸತ್ಯ!
ಗಿರೀಶ್ ಎಂಬ ವ್ಯಕ್ತಿಯೊಬ್ಬ 18-05-2022ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತನ್ನ ಬಳಿ 2 ಕಾರುಗಳಿದ್ದು ಆ ಕಾರುಗಳನ್ನು ಪರಮೇಶ್ ಎಂಬ ವ್ಯಕ್ತಿಗೆ 3 ದಿನಗಳ ಕಾಲ ಬಾಡಿಗೆ ಆಧಾರದಲ್ಲಿ ನೀಡಿದ್ದೆ. ಆದರೆ ಈಗ ಪರಮೇಶ್ ಕಾರುಗಳನ್ನು ವಾಪಾಸು ಕೊಡದೆ ಸತಾಯಿಸುತ್ತಿದ್ದಾನೆ. ಸಂಪರ್ಕಕ್ಕೂ ಸಿಗುತ್ತಿಲ್ಲ ಹೇಗಾದರೂ ಮಾಡಿ ಕಾರನ್ನು ಹುಡುಕಿಕೊಡಿ ಎಂದು ಗಿರೀಶ್ ದೂರು ದಾಖಲಿಸುತ್ತಾರೆ.
ಗಿರೀಶ್ ಮತ್ತು ಪರಮೇಶ್ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿರುವವರಾಗಿದ್ದು, ಸ್ನೇಹಿತರು ಆಗಿದ್ದರು. ಪರಮೇಶ್ ಗಿರೀಶ್ಗೆ ತಾನು ಬಾಡಿಗೆ ಆಧಾರದಲ್ಲಿ ಕಾರನ್ನು ನೀಡುವ ಬ್ಯುಸಿನೆಸ್ ಮಾಡುತ್ತಿದ್ದು, ದಿನಕ್ಕೆ ಕಾರೊಂದಕ್ಕೆ 1500 ರೂ. ಬಾಡಿಗೆ ಕೊಡು ಎಂದಾಗ ಕಾರಿನ ಸಾಲ ತೀರಿಸುವ ಸಲುವಾಗಿ ಗಿರೀಶ್ ಕಾರನ್ನು ಪರಮೇಶ್ಗೆ ಕೊಟ್ಟಿರುತ್ತಾರೆ.
ಇನ್ನೂ ಪರಮೇಶ್ ವಿಶಾಖ್ ಎಂಬುವವರಿ0ದ 5 ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದು, ಆ ಹಣ ಹಿಂತಿರುಗಿಸಲಾಗದೆ ಗಿರೀಶ್ ಅವರಿಂದ ಪಡೆದ ಕಾರುಗಳಲ್ಲಿ ಬ್ರೀಜಾ ಕಾರನ್ನು ವಿಶಾಖ್ ಗೆ ನೀಡಿ ನಿನ್ನ 5 ಲಕ್ಷ ಹಣ ಕೊಟ್ಟ ಮೇಲೆ ಕಾರು ಪಡೆದುಕೊಳ್ಳುವೆ ಎಂದು ಹೇಳಿ ಕೊಟ್ಟಿರುತ್ತಾನೆ. ವಿಶಾಖ್ ಹದಡಿ ಪೊಲೀಸ್ ಸಿಬ್ಬಂದಿಗೆ ಇದೇ ಕಾರನ್ನು ಉಪಯೋಗಿಸಿಕೊಳ್ಳುವಂತೆ ನೀಡಿರುತ್ತಾರೆ.
ಹೀಗೆ ಒಬ್ಬರಿಂದ ಮತ್ತೊಬ್ಬರಿಗೆ ವಿವಿಧ ಕಾರಣಗಳಿಂದ ಬದಲಾದ ಕಾರು ಹದಡಿ ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ್ ಅವರ ಬಳಿಗೆ ಬಂದು ತಾನು ಉಪಯೋಗಿಸುತ್ತಿರುವ ವೇಳೆ ಕಾಫಿ ಡೇ ಹತ್ತಿರ ಕಾರಿನ ಮಾಲೀಕ ಗಿರೀಶ್ ಕಾರನ್ನು ಗಮನಿಸುತ್ತಾನೆ. ಆಗ ಪೊಲೀಸ್ ಸಿಬ್ಬಂದಿ ಮಂಜುನಾಥ್ ಗೆ ಈ ಕಾರು ನನ್ನದು ನಿಮ್ಮ ಬಳಿ ಹೇಗೆ ಬಂತು ಎಂದು ವಿಚಾರಿಸುವ ವೇಳೆ ಮಾತಿಂದ ಮಾತು ಬೆಳೆದು ಪೊಲೀಸ್ ಸಿಬ್ಬಂದಿ ಗಿರೀಶ್ ಗೆ ಹೊಡೆಯುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
garudavoice21@gmail.com 9740365719