congress; ಮೊದಲು ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಿ

ದಾವಣಗೆರೆ, ನ.08: ಕಾಂಗ್ರೆಸ್‌ (Congress) ಸರ್ಕಾರ ಯಾವಾಗ ಬೇಕಾದರೂ ಬೀಳುತ್ತೆ ಎಂಬ ಬಿಜೆಪಿಗರ ಹಾಗೂ ಸ್ವಯಂಘೋಷಿತ ಬಿಜೆಪಿ ಕಾರ್ಯಕರ್ತರ ವಿಶ್ವಗುರು, ರಾಜ್ಯ ಬಿಜೆಪಿ ನಾಯಕರ ಕೆಲವರು ಹೇಳಿಕೆಗಳು ಕಂಡರೆ ನಿಜಕ್ಕೂ ಒಂದು ಹಾಸ್ಯಮಯ್ಯ ಎನಿಸುತ್ತದೆ ಎಂದು ದಾವಣಗೆರೆ ಜಿಲ್ಲಾ ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು ಸಾಗರ್.ಎಲ್. ಎಂ. ಹಚ್. ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹೋರಿ ಬೀಜಕ್ಕೆ ಹೋಲಿಸಿರುವ ಅವರು, ಬೀಜದ ಹೋರಿ ನಡೆಯುವಾಗ ಅದರ ಬೀಜ ಅಲುಗಾಡುತ್ತಿರುತ್ತದೆ. ಬೀಜ ಅಲುಗಾಡುತ್ತಿದ್ದರೂ ಅದು ಕೆಳಗೆ ಬೀಳುವುದಿಲ್ಲ. ಅದು ಹತ್ತು ಕಿ.ಮೀ. ದೂರ ಹೋದರೂ ಹಾಗೆಯೇ ಅಲುಗಾಡುತ್ತಿರುತ್ತದೆ. ಅಲುಗಾಡುವ ಹೋರಿ ಬೀಜ ತಿನ್ನಬೇಕು ಎಂದು ನಾಯಿಗಳು ಬೆನ್ನು ಬಿದ್ದಿರುತ್ತವೆ. ಆದರೆ, ಬೀಜ ಕೆಳಗೆ ಬೀಳುವುದಿಲ್ಲ. ನಾಯಿಗಳು ಹೋರಿಯ ಬೆನ್ನು ಬಿಡುವುದಿಲ್ಲ. ಈಗ ಬಿಜೆಪಿಗರ ಪರಿಸ್ಥಿತಿ ಹೀಗೆಯೇ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

pratima murder; ಚಾಲಕ ಕಿರಣ್ ನನ್ನುಕೆಲಸದಿಂದ ತೆಗೆದಿದ್ದೇ ಪ್ರತಿಮಾ ಅವ್ರಿಗೆ ಮುಳುವಾಯಿತೇ?

ರಾಜ್ಯ ಕಾಂಗ್ರೆಸ್ ಸರ್ಕಾರ ಆಳ್ವಿಕೆಗೆ ಬಂದು ಆರು ತಿಂಗಳಾದರೂ ಪ್ರಾದೇಶಿಕ ಪಕ್ಷ ಜೆಡಿಎಸ್ ಹಾಗೂ ರಾಷ್ಟ್ರೀಯ ಪಕ್ಷ ಬಿಜೆಪಿ ಪಕ್ಷದವರು, ಎಂದಿಗೂ ಒಬ್ಬ ಸಾಮರ್ಥ್ಯ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಲು ಅಸಮರ್ಥವಾಗಿದೆ. ಮೊದಲು ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!