25 ಕೋಟಿ ವೆಚ್ಚದ ಸಿ ಆರ್ ಸಿ ಕಟ್ಟಡ 21ರಂದು ಉದ್ಘಾಟನೆ : ಸಂಸದ ಜಿ.ಎಂ.ಸಿದ್ದೇಶ್ವರ

ಉದ್ಘಾಟನೆ

ದಾವಣಗೆರೆ: ಇದೇ ಫೆ.21ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವತಿಯಿಂದ ದಿವ್ಯಾಂಗರ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ದಾವಣಗೆರೆ ನಗರದ ವೊಡ್ಡಿನಹಳ್ಳಿ ಬಳಿ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನಡೆಯಲಿದೆ.
ಈ ಕೇಂದ್ರಕ್ಕಾಗಿ 9 ಎಕರೆ ಸರ್ಕಾರಿ ಜಾಗ ನೀಡಲಾಗಿದೆ, ಈ ಸ್ಥಳದಲ್ಲಿ ರೂ.25.00 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಈ ಸಂಸ್ಥೆಗೆ ವೊಡ್ಡಿನಹಳ್ಳಿ ಬಳಿ 9 ಎಕರೆ ಹಾಗೂ ಕೊಗ್ಗನೂರು ಬಳಿ 7.23 ಎಕರೆ ಹೀಗೆ ಒಟ್ಟು 16.23 ಎಕರೆ ಜಮೀನನ್ನು ನೀಡಲಾಗಿದೆ.
ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳಿಗೆ ಸೇರಿದಂತೆ ವಿಶೇಷ ಚೇತನ ವ್ಯಕ್ತಿಗಳಿಗೆ ಸೇವೆಯನ್ನು ಒದಗಿಸಲು ದಾವಣಗೆರೆಯಲ್ಲಿ 2017 ರ ಫೆಬ್ರವರಿ 17 ರಂದು ಕಾರ್ಯ ಆರಂಭ ಮಾಡಿದೆ. ಇಲ್ಲಿಯವರೆಗೆ ಸುಮಾರು 38557 ಜನರು ಜನರಿಗೆ ಶಾರ್ಟ್ ಟರ್ಮ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ದಿವ್ಯಾಂಗರು ವಿಶೇಷ ತರಬೇತಿಗೆ ನೊಂದಾಯಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸುಮಾರು 3212 ಜನರಿಗೆ ವೀಲ್ ಚೇರ್, ಶ್ರವಣ ಯಂತ್ರಗಳನ್ನು ವಿತರಣೆ ಮಾಡಲಾಗಿದೆ. 2019 ರಿಂದ ದಾವಣಗೆರೆ ಸಿಆರ್‍ಸಿ ಕೇಂದ್ರ 2 ಡಿಪ್ಲಮೋ ಕೋರ್ಸುಗಳನ್ನು ನಡೆಸುತ್ತಿದೆ.
ಇಂತಹ ಬಹುಮುಖಿ ಕೇಂದ್ರ ಬುಧವಾರ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರಕುಮಾರ್‍ರವರು ವರ್ಚುಯಲ್ ಮೂಲಕ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!