ದಾವಣಗೆರೆ ಲೋಕಸಭಾ ಕ್ಷೇತ್ರ ಅಹಿಂದ ವರ್ಗಕ್ಕೆ ಕಬ್ಬಿಣದ ಕಡಲೆ -ಜಿ.ಬಿ ವಿನಯ್ ಕುಮಾರ್ ವಿಷಾದ

ಹೊನ್ನಾಳಿ :6 ಇಂದು ಹೊನ್ನಾಳಿ ತಾಲೂಕಿನ ಸುಮಾರು 26 ಹಳ್ಳಿಗಳಿಗೆ ಭೇಟಿ ನೀಡಿ ಹೊಳೆ. ಹರಳಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋರಾಟಗಾರರ ಅವಶ್ಯಕತೆ ಬೇಡವಾಗಿದೆ.
ಹೋರಾಟಗಾರರು ನಾಯಕರಾಗಬೇಕಾಗಿದೆ ಹಿಂದುಳಿದ ಜನಾಂಗದವರ ನಾಯಕರಾಗುವ ಅವಶ್ಯಕತೆ ಇದೆ. ಎಂದು ಕರ್ನಾಟಕ ರಾಜ್ಯ ಔಟ್ರಿಚ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ನನ್ನದೇ ಒಂದು ವಿಷನ್ ಇಂದ, ಚಿಂತನೆಯಿಂದ ಹೋರಾಟ ಮಾಡಿದ್ದೇನೆ ಪ್ರಾಮಾಣಿಕವಾಗಿ ತಳಮಟ್ಟದಿಂದ ಹೋರಾಟ ಮಾಡಿದಂತಹ ನನಗೆ ಅನ್ಯಾಯವಾಗಿದೆ.

ಪರಿಶ್ರಮದಿಂದ ಸಂಘಟನೆ ಮಾಡಿದ ನನ್ನ ಹೆಸರು ಮಂಚೂಣಿಯಲ್ಲಿತ್ತು, ಆದರೆ ಕೆಲ ಕಾಣದ ಕೈಗಳಿಂದ ಅವಕಾಶ ವಂಚಿತನಾಗಿದ್ದೇನೆ .ಅವಕಾಶ ಸಿಗದಿದ್ದರೂ ಅವಕಾಶ ಸೃಷ್ಟಿ ಮಾಡಬೇಕಾಗಿದೆ ನಿಮ್ಮೆಲ್ಲರ ಅಭಿಪ್ರಾಯದಂತೆ ಮುಂದಿನ ತೀರ್ಮಾನ. ನಿಮ್ಮ ಅಪೇಕ್ಷೆ ನಿರ್ಧಾರ ಚುನಾವಣೆ ಮತದಾನದವರಿಗೂ ಅಚಲವಾಗಿರಬೇಕು

ಅಮಿಷಗಳಿಗೆ ಕಿವಿಗೊಡದೆ ಬದಲಾವಣೆ ಬಯಸ ಬೇಕಾಗಿದೆ ನೀವೆಲ್ಲ ಅಚಲವಾಗಿ ಬದ್ಧರಾಗಿರಬೇಕು ಸಾಮಾಜಿಕ ಅನ್ಯಾಯದ ಶೋಷಣೆ ವಿರುದ್ಧ ನನ್ನ ಹೋರಾಟವಾಗಿದೆ ದಾವಣಗೆರೆಗೆ ವರಿಷ್ಠರಾದ. ಈಶ್ವರ್ ಖಂಡ್ರೆ, ಕ್ಷೇತ್ರದ ಜನ ಅಭಿಪ್ರಾಯ. ಸಂಗ್ರಹಿಸಲು ಬಂದಾಗ ನನ್ನ ಪರವಾಗಿ 90% ಹೆಸರು ಪ್ರಸ್ತಾಪಿಸಿದರು ಆದರೆ ಅಂದಿನ ಅಭಿಪ್ರಾಯದ ಶಿಫಾರಸಿನಲ್ಲಿ ನನ್ನ ಹೆಸರು. ಇರಲಿಲ್ಲ ಜಾತಿವಾದ ಎಷ್ಟರಮಟ್ಟಿಗೆ ಎಂಬುದು ನನಗೆ ಸಾಕಷ್ಟು ಬೇಸರವಾಯಿತು ಆರ್ಥಿಕ ಪ್ರಬಲರಿಗೆ ಪಕ್ಷ ಮಣೆ. ಹಾಕಿ ಚುನಾವಣೆಗೆ ಹೆಸರು ಘೋಷಣೆ ಮಾಡಿದೆ. ಆದರೆ ನಮ್ಮಂತ ಯುವಕರು,ಸಂಘಟಕರು , ಶೋಷಿತ ಸಮುದಾಯದ ನಾಯಕರು.

ಪಕ್ಷಕ್ಕೆ ಬೇಡವಾದರೆ ಜಾತ್ಯತೀತವಾಗಿ ಒಗ್ಗಟ್ಟಾಗಿ ನೀವು ನನ್ನ ಜೊತೆ ಇದ್ದಾಗ ಸ್ವಾಭಿಮಾನದ ಹೋರಾಟಕ್ಕೆ ಸಜ್ಜಾಗೋಣ ಎಂದರು
ಈ ಸಮಾರಂಭದಲ್ಲಿ ಗ್ರಾಮದ ಮುಖಂಡರುಗಳು ಮಾತನಾಡಿ ಪಕ್ಷ ನೋಡುವುದಕ್ಕಿಂತ ವ್ಯಕ್ತಿ ನೋಡಿ ಈ ಬಾರಿ ನಾವು ಮತ ಹಾಕೋಣ ಎಂದು ಅಚಲವಾಗಿ ಸಭೆಯಲ್ಲಿ ಹೇಳಿದರು ಚೆನ್ನಯ ಒಡೆಯರ್ ತದನಂತರ ಮಾವ ಅಳಿಯರ ಒಪ್ಪಂದದ ರಾಜಕೀಯ ಹಿಂದುಳಿದ ವರ್ಗದವರನ್ನು ಇಂತಹ ಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಸಭೆಯಲ್ಲಿ ಹೇಳಿದರು.
ಮಹಿಳೆ- ಮಹಿಳೆಯರ ನಡುವೆ ಯುವ ನಾಯಕನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದು ನಮಗೆಲ್ಲ ನಿರಾಶೆಯಾಗಿದೆ .. ಯುವನಾಯಕ ಸಂಘಟನಾ ಚತುರ ವಿನಯ್ ಕುಮಾರ್ ಜಿ ಬಿ ಯವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು
ಕ್ಷೇತ್ರದ ಮತದಾರರ ಒತ್ತಡ ಕೂಡ ವಿನಯ್ ಕುಮಾರ್ ಅವರಿಗೆ ಹೆಚ್ಚಿರುವುದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ಪಕ್ಷೇತರವಾಗಿ ನಿಂತು ಹಿಂದುಳಿದ ದಲಿತ ಶೋಷಿತ . ಧ್ವನಿ ಇಲ್ಲದವರ ಪರವಾಗಿ ನಿಲ್ಲಬೇಕಾಗಿದೆ ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಬಾರದು ಎಂದು ಹೇಳಿದರು

ಸ್ವಾಭಿಮಾನದ ಹೋರಾಟ ಆರ್ಥಿಕ ಪ್ರಬಲರಿಗೆ ನಾವು ತೋರಿಸಬೇಕಾಗಿದೆ ಇಲ್ಲವಾದರೆ ಶೋಷಿತ ವರ್ಗ. ಅವರ ಕಾಲ್ತುಳಿತಕ್ಕೆ ಈಡಾಗಬೇಕಾಗುತ್ತದೆ ಸಂಘಟನೆಯ ಚತುರ ವಿನಯ್ ಗೆ ಅನ್ಯಾಯವಾಗಿದೆ ಜನಸಾಮಾನ್ಯರಲ್ಲಿ ಶಕ್ತಿ ಇದೆ ಸಂಸತ್ ಭವನದಲ್ಲಿ ವಿನಯ್ ಕುಮಾರ್ ರನ್ನು ನಾವು ನೋಡಿದಾಗ ಮಾತ್ರ ಸ್ವಾಭಿಮಾನಕ್ಕೆ ಬೆಲೆ ಬಂ ತಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು
ಕಳೆದ ಬಾರಿ ಕೂಡ ಮಂಜಪ್ಪನವರನ್ನು ಅವರು ಚುನಾವಣೆಗೆ ನಿಲ್ಲಿಸಿದಾಗ ಕಾಲಾವಕಾಶವಿಲ್ಲದೆ ಅವರನ್ನು ಕ್ಷೇತ್ರದ ಅಹಿಂದ ವರ್ಗದ ಅರಕೆಯ ಕುರಿಯನ್ನಾಗಿ ಮಾಡಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಚುನಾವಣೆಯಲ್ಲಿ ವಿನಯ್ ಕುಮಾರ್ ಅವರನ್ನು ಬೆಂಬಲಿಸಿ ನಮ್ಮ ಸ್ವಾಭಿಮಾನವನ್ನು ಎತ್ತಿ ತೋರಿಸೋಣ ಎಂದು ಹೇಳಿದರು.
ನಂತರ ವಿನಯ್ ಕುಮಾರ್ ನಡೆ … ಹೊನ್ನಾಳಿ ತಾಲೂಕಿನ ಕೋಣನಾಯಕನಹಳ್ಳಿ, ಹನುಮಸಾಗರ ತಾಂಡ . ಬಳ್ಳೇಶ್ವರ.. ಹೊಳೆ ಅರಳಹಳ್ಳಿ. ಬಲಮುರಿ ಗೋಪಗೊಂಡನಹಳ್ಳಿ ಹೊಸ ಕಟ್ಟೆ ಎಸ್ ಮಲ್ಲಾಪುರ ಚಿಕ್ಕೇರಳ್ಳಿ . ಹತ್ತೂರು ಮಾದೇನಹಳ್ಳಿ ಕತ್ತಿಗೆ ಜೀನಹಳ್ಳಿ ಗುಡಹಳ್ಳಿ ಬೆಳಗುತ್ತಿ ರಾಮೇಶ್ವರ ಎರಗನಾಳು ಕುದುರೆಕೊಂಡ . ಸೊರೆಹೊನ್ನೇ.ಆರುಂಡಿ,ಕಂಚಿಕೊಪ್ಪ ತೊಗಲಹಳ್ಳಿ. ಸೊರಟೂರು. ಎಚ್ ಕಡದ ಕಟ್ಟೆ.ಮಾರಿ. ಕೊಪ್ಪ ಬಡಾವಣೆ ಗ್ರಾಮಗಳಿಗೆ ಭೇಟಿ ನೀಡಿ ಜನ ಅಭಿಪ್ರಾಯ ಪಡೆದರು.

Leave a Reply

Your email address will not be published. Required fields are marked *

error: Content is protected !!