ದಾವಣಗೆರೆ: ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಪಾರಂಪರಿಕ ದಿನದ ಅಂಗವಾಗಿ ವೈವಿಧ್ಯತೆಯಲ್ಲಿ ಏಕತೆ ಘೋಷವಾಕ್ಯದೊಂದಿಗೆ ‘ದೇಸಿ ಕಲರವ – 2023’ ಕಾರ್ಯಕ್ರಮವನ್ನು ಮೇ.27 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಂಶುಪಾಲೆ ಕಮಲಾ ಸೊಪ್ಪಿನ್ ಮತ್ತು ಎವಿಕೆ ಪಿಯು ಕಾಲೇಜಿನ ಪ್ರಾಂಶುಪಾಲ ರವಿ ಬಣಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದು ಐಕ್ಯೂಎಸಿ-ಆರ್ಡಿನೇಟರ್ ಆರ್.ಆರ್. ಶಿವಕುಮಾರ್ ಉಪಸ್ಥಿತರಿರುವರು.
