‘ಮೇಕೆದಾಟು ಪಾದಯಾತ್ರೆ’ ವೇಳೆ ಡಿ.ಕೆ.ಶಿವಕುಮಾರ್ ರಿಂದ ಶಾಲಾ ಮಕ್ಕಳ ಭೇಟಿ.! ಮಕ್ಕಳ ಆಯೋಗದಿಂದ ಡಿಜಿಗೆ ಪತ್ರ
![](https://garudavoice.com/wp-content/uploads/2022/01/IMG-20220110-WA0021-778x1024.jpg)
ಬೆಂಗಳೂರು: ಶಾಲೆಯಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ವಿಫಲವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅಗತ್ಯ ಕ್ರಮ ಮತ್ತು ವಿಚಾರಣೆಯನ್ನು ಪ್ರಾರಂಭಿಸುವಂತೆ ಭಾರತ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವ ಕರ್ನಾಟಕ ರಾಜ್ಯ ಪೋಲೀಸ್ ಜನರಲ್ ಅವರಿಗೆ ಮನವಿ ಮಾಡಿದೆ.
‘ಮೇಕೆದಾಟು ಪಾದಯಾತ್ರೆ’ ಕಾರ್ಯಕ್ರಮದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಲಾ ಮಕ್ಕಳನ್ನು ಭೇಟಿ ಮಾಡಿ ಮಕ್ಕಳನ್ನು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿರುವುದು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವನ್ನು ಆಯೋಗವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ್ದು, ವೀಡಿಯೊದಲ್ಲಿ, ಮಕ್ಕಳು ಮತ್ತು ಕೆಪಿಸಿಸಿ ಅಧ್ಯಕ್ಷರು ಮುಖಗವಸುಗಳಿಲ್ಲದೆ ಕೋವಿಡ್ -19 ಸೂಕ್ತ ನಡವಳಿಕೆಯನ್ನು ಅನುಸರಿಸದೆ ಮಾರ್ಗಸೂಚಿ ಉಲ್ಲಂಘಿಸಿರುವ ಹಿನ್ನೆಲೆ ಅಗತ್ಯ ಕ್ರಮ ವಹಿಸುವಂತೆ ಆಯೋಗ ವಿನಂತಿಸಿದೆ.