27 ಅಥವಾ 28 ಚುನಾವಣೆ ಘೋಷಣೆ ಆಗುತ್ತೆ.! ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಸಿದ್ಧರಾಮಯ್ಯ

ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಸಿದ್ಧರಾಮಯ್ಯ

ಚನ್ನಗಿರಿ: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಅಂತ ಸುಳ್ಳು ಹೇಳಿ‌ಕೊಂಡು ಓಡಾಡ್ತಿದ್ದಾರೆ. ಅವರಿಗೆ ಮಾನ-ಮರ್ಯಾದೆ ಇಲ್ಲ. ಅವರು ಲಜ್ಜೆ ಗೆಟ್ಟವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗದುಕೊಂಡಿದ್ದಾರೆ.
ಚನ್ನಗಿರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಮಾತಾಡಿದಾಗ ಬೊಮ್ಮಾಯಿ ದಾಖಲಾತಿ ಕೇಳ್ತಿದ್ರು. ಮಾಡಾಳು ವಿರೂಪಾಕ್ಷಪ್ಪ ಅವರ ನಿವಾಸದ ಮೇಲೆ ನಡೆದಿದ ದಾಳಿಗಿಂತ ದಾಖಲೇ ಬೇಕೇ? ಎಂದು ಪ್ರಶ್ನಿಸಿದರು.
ಈಗ ದಾಖಲೆ ದೊರೆತಿದೆ. ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ಇಷ್ಟೊತ್ತಿಗೆ ರಾಜೀನಾಮೆ ಕೊಡುತ್ತಿದ್ದರು ಎಂದರು.
ಭ್ರಷ್ಠಾಚಾರ ನಡೆಯುತ್ತಿರುವ ಕುರಿತು ಕರ್ನಾಟಕದ ಇತಿಹಾಸದಲ್ಲಿ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆಯುವಂತಾಗಿದೆ. ಕೆಂಪಣ್ಣ ಎಂಬುವವರು 40% ಕಮಿಷನ್ ಕೇಳ್ತಿದ್ದಾರೆ, ನಾವು ಕೆಲಸ ಹೇಗೆ ಮಾಡೋದು ಅಂತ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅನುದಾನ ಕೇಳಿದರೆ ಲಂಚ ಕೇಳುತ್ತಿದ್ದಾರೆ ಎಂದು ರೂಪ್ಸಾ ಸಂಘದವರೂ ಸಹ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಅನುದಾನಕ್ಕೆ ಲಂಚ ಕೊಡಬೇಕು ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಅವರ ಪಕ್ಷದ ಗುತ್ತಿಗೆದಾರನಿಗೆ 40% ಕಮಿಷನ್ ಕೇಳ್ತಾರೆ. ಕೊಡಲಾಗದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿ ಅವಧಿಯಲ್ಲಿ ಭ್ರಷ್ಠಾಚಾರ ಅತಿಯಾಗಿದೆ ಎಂದು ಟೀಕಿಸಿದರು.
ಇದೇ ತಿಂಗಳ 27 ಅಥವಾ 28 ಚುನಾವಣೆ ಘೋಷಣೆ ಆಗತ್ತದೆ. ಚುನಾವಣೆಗೆ ಇನ್ನೂ 45 ದಿನ ಮಾತ್ರ ಬಾಕಿ‌ ಇದ್ದು, ಕಾರ್ಯಕರ್ತರು ಸನ್ನದ್ಧರಾಗುವಂತೆ ಸಿದ್ದರಾಮಯ್ಯ ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!