Shamanuru Shivashankarappa : ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ
![ರಾಜ್ಯಪಾಲರೊಂದಿಗೆ ಎಸ್ಸೆಸ್ ಸೌಹಾರ್ದ ಭೇಟಿ](https://garudavoice.com/wp-content/uploads/2023/07/IMG-20230718-WA0002.jpg)
ದಾವಣಗೆರೆ: ಮಾನ್ಯ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಬುಧವಾರ (ಜು.19 ) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇಂದೊಂದು ಸೌಹಾರ್ದ ಭೇಟಿಯಾಗಿದ್ದು, ಈ ಹಿಂದೆ ರಾಜ್ಯಪಾಲರು ದಾವಣಗೆರೆಗೆ ಆಗಮಿಸಿದಾಗ ಎಸ್ಸೆಸ್ ಅವರು ಮನೆಗೆ ಆಹ್ವಾನಿಸಿದ್ದರು.
ಆದರೆ ಕಾರಣಾಂತರಗಳಿಂದ ಆಗಮಿಸಲು ಸಾಧ್ಯವಾಗದ ಕಾರಣ ರಾಜ್ಯಪಾಲರೇ ಎಸ್ಸೆಸ್ ಅವರನ್ನು ರಾಜಭವನಕ್ಕೆ ಆಹ್ವಾನಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ರಾಜು ಭಂಡಾರಿ, ಹರೀಶ್, ಆಲೂರು ರಾಜಶೇಖರ್ ಇದ್ದರು.