ಬಾಡಾ ಕ್ರಾಸ್ ಬಳಿ ಚಪ್ಪಲಿ ಕೊಡಿಸುವ ನೆಪದಿಂದ ದರೋಡೆ ಮಾಡಿದ್ದ ಐವರ ಬಂಧನ

ಬಾಡಾ ಕ್ರಾಸ್ ಬಳಿ ಚಪ್ಪಲಿ ಕೊಡಿಸುವ ನೆಪದಿಂದ ದರೋಡೆ ಮಾಡಿದ್ದ ಐವರ ಬಂಧನ

ದಾವಣಗೆರೆ: ಕೇರಳಾದ ವೈನಾಡ್ ಜಿಲ್ಲೆಯ ರಾಶಿಕ್ ಹಾಗೂ ಆತನ ಸ್ನೇಹಿತ ಅಭಿನೋಶನ್, ನಿಜಮುದ್ದೀನ್ ಅವರಿಗೆ ರಫೀಕ್ ಎಂಬ ವ್ಯಕ್ತಿ ಕಡಿಮೆ ದರದಲ್ಲಿ ಕಂಪನಿಯಿಂದ ನೇರವಾಗಿ ಚಪ್ಪಲಿ ಕೊಡಿಸುವುದಾಗಿ ನಂಬಿಸಿ, ಬಾಡಾ ಕ್ರಾಸ್ ಆವರಗೆರೆ ಕೆರೆ ರಸ್ತೆ ಬಳಿ ಕರೆಯಿಸಿಕೊಂಡು ದರೋಡೆ ಮಾಡಿದ್ದ ಐದು ಜನರ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರಪನಹಳ್ಳಿ ಯಲ್ಲಾಪುರದ ಪ್ರವೀಣ್ (23)ದೇವಣ್ಣ (39), ಸುಭಾಷ್ (24) ವೀರೇಶ್ (23) ಹಾಗೂ ದಾವಣಗೆರೆ ಕೆಟಿಜೆ ನಗರದ ಎಲ್. ಸಂಜಯ್ (23) ಇವರುಗಳನ್ನು ಬಂಧಿತರು. ಇವರಿಂದ ದರೋಡೆ ಮಾಡಿದ್ದ 10 ಸಾವಿರ ರೂ. ನಗದು, 40 ಸಾವಿರ ರೂ. ಬೆಲೆ ಬಾಳುವ 2 ಮೊಬೈಲ್, ಪರ್ಸ್, ಬ್ಯಾಗ್ ಹಾಗೂ 8 ಲಕ್ಷ ರೂ. ಬೆಲೆಯ ಒಂದು ಕಾರು, 1.50 ಲಕ್ಷ ರೂ. ಬೆಲೆಯ ಒಂದು ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಕಡಿಮೆ ಬೆಲೆಗೆ ಚಪ್ಪಲಿಯನ್ನು ಕಂಪನಿಯಿಂದ ಕೊಡಿಸುವುದಾಗಿ ಹೇಳಿ ತಮ್ಮನ್ನು ದಾವಣಗೆರೆಯ ಬಾಡಾ ಕ್ರಾಸ್ ಬಳಿ ಕರೆಯಿಸಿ ರಫೀಕ್ ಹಾಗೂ ಆತನ ಐವರು ಸಹಚರರು ಹಲ್ಲೆ ಮಾಡಿ 57 ಸಾವಿರ ರೂ. ನಗದು, 3 ಮೊಬೈಲ್, ಪರ್ಸ್, ದಾಖಲಾತಿ ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾಗಿ ಕೇರಳಾದ ವೈನಾಡ್ ಜಿಲ್ಲೆಯ ರಾಶಿಕ್ ಹಾಗೂ ಆತನ ಸ್ನೇಹಿತ ಅಭಿನೋಶನ್, ನಿಜಮುದ್ದೀನ್ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಗಳ ಪತ್ತೆ ಕಾರ್ಯವನ್ನು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ, ಆರ್.ಪಿ. ಅನಿಲ್, ಪಿಎಸ್‌ಐ ಎಂ.ಎಸ್. ದೊಡ್ಡಮನಿ, ಸಿಬ್ಬಂದಿಗಳಾದ ಆನಂದ ಮಂದಲಮನಿ, ಗೋಪಿನಾಥ್ ಬಿ.ನಾಯ್ಕ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜುನಾಥ ಬಿ.ವಿ., ರುದ್ರೇಶ್, ಲಕ್ಷ್ಮಣ, ರಾಮಚಂದ್ರಪ್ಪ, ರಾಘವೇಂದ್ರ, ಶಾಂತರಾಜ್, ಸೋಮಪ್ಪ, ಮಾರುತಿ, ದೇವರಾಜ್, ಗುರುಸಿದ್ದನಗೌಡ ಅವರುಗಳಿಗೆ ಎಸ್ಪಿ ಡಾ.ಅರುಣ್ ಕೆ ಹಾಗೂ ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಶ್ಲ್ಯಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!