ಶಿವಮೊಗ್ಗದಲ್ಲಿ ಹೋರಿ ಹಬ್ಬ ದುರಂತ: ಇಬ್ಬರು ದುರ್ಮರಣ

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಹೋರಿ ಬೆದರಿಸುವ ಹಬ್ಬದಲ್ಲಿ  ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕೊನಗವಳ್ಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಶಿಕಾರಿಪುರದ ತಾಲ್ಲೂಕಿನ ಮಳೂರಿನಲ್ಲಿ ಸಾವನ್ನಪ್ಪಿದ್ದಾರೆ

ಕೊನಗವಳ್ಳಿಯಲ್ಲಿ ನಡೆದ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಆಲ್ಕೋಳ ನಿವಾಸಿ 32 ವರ್ಷದ ಲೋಕೇಶ್​ ಸಾವನ್ನಪ್ಪಿದ್ಧಾರೆ. ನಿನ್ನೆ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಲೋಕೆಶ್ ಇವತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

ಇನ್ನೂ ಇತ್ತ ಶಿಕಾರಿಪುರದ ಮಳೂರಿನಲ್ಲಿ ರಂಗನಾಥ್ ಎಂಬವರು ಸಾವನ್ನಪ್ಪಿದ್ದಾರೆ.ಮಳೂರಿನಲ್ಲಿ ಸ್ಪರ್ಧೆಯನ್ನು ನೋಡಲು ಹೋಗಿದ್ದ ರಂಘನಾಥ್ ಸಾವನ್ನಪ್ಪಿದ್ಧಾರೆ. ಇಬ್ಬರು ಸಹ ಹೋರಿ ತಿವಿತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇನ್ನೂ ರಂಗನಾಥ್ ಎಗ್ರೈಸ್ ಅಂಗಡಿಯಿಟ್ಟುಕೊಂಡಿದ್ದರೆ, ಲೋಕೇಶ್ ಆಟೊ ಓಡಿಸಿ ಜೀವನ ಸಾಗಿಸುತ್ತಿದ್ದರು. ಇಬ್ಬರ ಶವ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಕುಟುಂಬಸ್ಥರು ನ್ಯಾಯ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!