ಲೋಕಲ್ ಸುದ್ದಿ

ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ರಾಜ್ಯದಿಂದ ಯಾರೂ ತೆರಳುತ್ತಿಲ್ಲ ಲಕ್ಷ್ಮೀದೇವಿ ದಯಾನಂದ್ ಸ್ಪಷ್ಟನೆ

ದಾವಣಗೆರೆ: ಛತ್ತೀಸ್ ಘಡ್ ಬಿಲಾಯಿಯಲ್ಲಿ ಇದೇ ಆಗಸ್ಟ್.25 ರಿಂದ 27 ರವರೆಗೆ ನಡೆಯುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕದಿಂದ ಯಾರೂ ತೆರಳುತ್ತಿಲ್ಲ. ಏಕೆಂದರೆ ಉತ್ತರ ಭಾರತದಲ್ಲಿ ಅತಿಯಾದ ಮಳೆ, ಪ್ರಕ್ಷುಬ್ಧ ವಾತಾವರಣ ಇರುವುದರಿಂದ ಹಾಗೂ ಸಾಂಪ್ರದಾಯಕ ರೋಗಗಳಾದ ಡೆಂಗ್ಯು, ಮದ್ರಾಸ್ ಕಣ್ಣು, ರೈಲುಗಳ ಅವ್ಯವಸ್ಥೆಗಳಿಂದಾಗಿ ಕ್ರೀಡಾಪಟುಗಳ ಆರೋಗ್ಯ ದೃಷ್ಟಿಯಿಂದ ಯಾರೂ ಭಾಗವಹಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ದಾವಣಗೆರೆ ಸಮಿತಿ ಸ್ಪಷ್ಟಪಡಿಸಿದೆ.

ಮುಂಬರುವ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರದಲ್ಲಿ ಹಾಗೂ ನವೆಂಬರ್ ನಲ್ಲಿ ಗೋವಾದಲ್ಲಿ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳು ನಡೆಯಲಿದ್ದು, ಆಗ ಕ್ರೀಡಾಪಟುಗಳು ತೆರಳಬೇಕೆಂದು ಅಸೋಸಿಯೇಷನ್ ಕಾರ್ಯದರ್ಶಿ ಲಕ್ಷ್ಮೀದೇವಿ ದಯಾನಂದ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top