lokayukta; ಲೋಕಾ ಬಲೆಗೆ ಬಿದ್ದ ಪಿಡಿಒ

ದಾವಣಗೆರೆ, ಅ.28: ಇಲ್ಲಿನ ಜಗಳೂರಿನಲ್ಲಿ ಲೋಕಾಯುಕ್ತ (Lokayukta) ದಾಳಿ ನಡೆಸಿದ್ದು, ಹಣ ಪಡೆಯುವಾಗ ಪಿಡಿಒ ನಂದಿಲಿಂಗೇಶ್ವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಾಟಾ ಆಪರೇಟರ್ ಅಜ್ಜಯ್ಯ ಅವರನ್ನು ಬಂಧಿಸಲಾಗಿದೆ. ಹತ್ತು ಸಾವಿರ ರೂ.ಗೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.

ಜಗಳೂರು ತಾಲೂಕಿನ ಕೆಂಚನಹಳ್ಳಿ ಗ್ರಾಮದ ಪಿಡಿಒ ತಾಲೂಕು ಪಂಚಾಯತಿ ಆವರಣದಲ್ಲಿ ಘಟನೆ ನಡೆದಿದೆ. ಇ-ಸ್ವತ್ತು ಮಾಡಿಸಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದೆ.

ಕೆಳಗೋಟೆ ಗ್ರಾಮದ ಬಸವನಗೌಡರಿಂದ ಲಂಚಕ್ಕೆ ಡಿಮ್ಯಾಂಡ್ ಇಟ್ಟ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Ph.d; ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ

Leave a Reply

Your email address will not be published. Required fields are marked *

error: Content is protected !!