ದಂತ ವೈದ್ಯರಿಗೆ ಕೆಲಸದ ಆಮೀಷ.! 7.54 ಲಕ್ಷ ವಂಚನೆ ಮಾಡಿದ ವೈದ್ಯರು

ದಂತ ವೈದ್ಯರಿಗೆ ಕೆಲಸದ ಆಮೀಷ.! 7.54 ಲಕ್ಷ ವಂಚನೆ ಮಾಡಿದ ವೈದ್ಯರು

ದಾವಣಗೆರೆ: ದಂತ ವೈದ್ಯಾಧಿಕಾರಿಗಳ ಹುದ್ದೆಯ ಆಮಿಷ ತೋರಿಸಿ ಇಬ್ಬರು ದಂತ ವೈದ್ಯರಿಗೆ 7.54 ಲಕ್ಷ ರೂ. ವಂಚಿಸಿರುವ ಪ್ರಕರಣ ನಡೆದಿದೆ.
ಹೊಳಲ್ಕೆರೆಯ ಸಂತೋಷ್ ದಂತ ಚಿಕಿತ್ಸಾಲಯದ ವೈದ್ಯ ಡಾ.ಕೆ.ವಿ. ಸಂತೋಷ್ ಹಾಗೂ ಮತ್ತೊಬ್ಬ ವೈದ್ಯ ಡಾ.ಮಹಮದ್ ಇಮ್ರಾನುಲ್ಲಾ ಮೋಸ ಹೋದವರಾದರೆ, ದಾವಣಗೆರೆ ತಾಲ್ಲೂಕಿನ ಹೂವಿನಮಡು ಗ್ರಾಮದ ವೈದ್ಯಾಧಿಕಾರಿ ಡಾ. ಭುವನೇಶ್‌ ನಾಯ್ಕ ಹಾಗೂ ಕಾಲೇಜ್ ಆಫ್‌ ಡೆಂಟಲ್ ಸೈನ್ಸ್‌ನ ಉಪನ್ಯಾಸಕ ಡಾ.ಸತ್ಯಪ್ರಸಾದ್ ಮೋಸ ಮಾಡಿದವರಾಗಿದ್ದಾರೆ.
2020 ಸೆಪ್ಟೆಂಬರ್‌ನಲ್ಲಿ ದಂತ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ನನ್ನ ಪರಿಚಿತರೊಬ್ಬರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಪರ್ಕವಿದೆ. ಹುದ್ದೆಗೆ ಆಯ್ಕೆ ಮಾಡಲು 10 ಲಕ್ಷವಾಗುತ್ತದೆ ಎಂದು ಸಂತೋಷ್ ಅವರಿಗೆ ಸ್ನೇಹಿತರಾಗಿದ್ದ ಸತ್ಯಪ್ರಸಾದ್ ಮುಂಡವಾಗಿ 5 ಲಕ್ಷ ರೂ. ಕೊಡಬೇಕು ಎಂದು ನಂಬಿಸಿದ್ದರು.
ನಗರದ ಸ್ಟೇಡಿಯಂ ಹಿಂಭಾಗದ ರಸ್ತೆಯಲ್ಲಿ ಸಂತೋಷ್ ಅವರಿಂದ 3 ಲಕ್ಷ ರೂ. ಹಾಗೂ ಮಹಮದ್ ಇಮ್ರಾನ್‌ ಉಲ್ಲಾ ಅವರಿಂದ 2.50 ಲಕ್ಷ ರೂ.ಗಳನ್ನು ಭುವನೇಶ್ ಹಾಗೂ ಸತ್ಯಪ್ರಸಾದ್ ವಸೂಲಿ ಮಾಡಿದ್ದರು.
ವಾಟ್ಸ್‌ ಆಪ್‌ನಲ್ಲಿ ನಕಲಿ ಆಯ್ಕೆ ಪಟ್ಟಿ ಕಳುಹಿಸಿದಾಗ ಅದರಲ್ಲಿ ಈ ಇಬ್ಬರು ದಂತ ವೈದ್ಯರ ಹೆಸರಿತ್ತು. ಆ ಬಳಿಕ ಸಂತೋಷ್‌ ಅವರಿಂದ 1.54 ಲಕ್ಷ ಹಾಗೂ ಇಮ್ರಾನ್ ಉಲ್ಲಾ ಅವರಿಂ 50 ಸಾವಿರ ವಸೂಲಿ ಮಾಡಿದ್ದರು. ಆದರೆ ಆ ವೇಳೆ ನೇಮಕಾತಿ ಪಟ್ಟಿ ಬಿಡುಗಡೆ ಆಗಿರಲಿಲ್ಲ. 2022ರ ಮೇ 17ರಂದು ಬಿಡುಗಡೆಯಾದ ನೇಮಕಾತಿ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ. ಆಗ ಮೋಸ ಮಾಡಿರುವುದು ಗೊತ್ತಾಗಿದೆ. ಬಡಾವಣೆ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!