mla; ಸಂತೆಯಲ್ಲಿ ತರಕಾರಿ ಖರೀದಿಸಿ ಸರಳತೆ ತೋರಿದ ಶಾಸಕ ಬಸವರಾಜು ವಿ ಶಿವಗಂಗಾ

ಚನ್ನಗಿರಿ:  ಶಾಸಕರಾದ ಬಸವರಾಜು ವಿ ಶಿವಗಂಗಾ  ದೇವರಹಳ್ಳಿ  ಸಂತೆ ಹೂ ಮತ್ತು ತರಕಾರಿ ಖರೀದಿಸಿದರು.ಕ್ಷೇತ್ರ ಪ್ರವಾಸ ವೇಳೆ ದೇವರಹಳ್ಳಿಗೆ ಭೇಟಿ ನೀಡಿದ ಅವರು ಸಂತೆಗೆ ಆಗಮಿಸಿ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿದರು. ಇದೇವೇಳೆ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ಜವಳಿಕಾಯಿ, ಟೊಮೋಟೊ ಇನ್ನೀತರೆ ತರಕಾರಿಗಳನ್ನು ಖರೀದಿ ಮಾಡಿದರು.

lokayukta trap; ಪೋಡಿ ನಂಬರ್ ಸರಿಮಾಡಲು ಲಂಚ: ದಾವಣಗೆರೆ ಸರ್ವೇ ಸುಪರ್ ವೈಸರ್ ಲೋಕಾಯುಕ್ತ ಬಲೆಗೆ
ವಾರದ ಸಂತೆಗೆ ಬಂದು ವ್ಯಾಪಾರ ಮಾಡುವವರು ಕೋಟ್ಯಧಿಪತಿಗಳಲ್ಲ, ಉದ್ಯಮಿಗಳಲ್ಲ, ಸರಕಾರಿ ನೌಕರರೂ ಅಲ್ಲ. ಎಲ್ಲರೂ ಕೃಷಿಕರು, ಕಾರ್ಮಿಕರು ಮತ್ತು ದುಡಿಯುವ ವರ್ಗದ ಬಡವರು.ಜನತೆಯು ಮಾಲ್ ಮತ್ತಿತರ ಸ್ಥಳಗಳಲ್ಲಿ  ತರಕಾರಿಗಳನ್ನು ಖರೀದಿಸುವುದಕ್ಕಿಂತ ಹಳ್ಳಿಗಾಡಿನ ರೈತರು ಬೆಳೆಯುವ ತಾಜಾ ತಾಜಾ ತರಕಾರಿಗಳನ್ನು ಖರೀದಿ ಮಾಡಿ ಎಂದು ಇತರೆಯರಿಗೂ ಸಲಹೆ ನೀಡಿದರು. ದೀಪಾವಳಿ ಹಬ್ಬ ಹಿನ್ನೆಲೆ ಬೇಕಾದ ತರಕಾರಿ ಖರೀದಿಸಿದ ಶಾಸಕರು ರೈತರು ಬೆಳೆದ ತರಕಾರಿ ಖರೀದಿಸಿ ಉಪಯೋಗಿಸಿದರೆ ಆರೋಗ್ಯಕ್ಕೂ ಉತ್ತಮ ಎಂದರು. ಇನ್ನೂ ಶಾಸಕರೇ ವ್ಯಾಪಾರ ಮಾಡಿದ್ದ ಹಿನ್ನೆಲೆ ರೈತರು ಖುಷಿ ಆದರು.

Leave a Reply

Your email address will not be published. Required fields are marked *

error: Content is protected !!