ಮುಂದುವರಿದ ಶಾಮನೂರು ಕುಟುಂಬದ ಉಚಿತ ಲಸಿಕಾ ಅಭಿಯಾನ: ಆನೆಕೊಂಡದಲ್ಲಿ ಎಸ್ ಎಸ್ ರಿಂದ ನಾಗರಿಕರ ವಿಚಾರಣೆ
![](https://garudavoice.com/wp-content/uploads/2021/06/IMG-20210629-WA0011-1024x768.jpg)
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 21ನೇ ವಾರ್ಡಿನ ಆನೆಕೊಂಡದ ಎ.ಕೆ.ಹಟ್ಟಿಯ ನಾಗರೀಕರಿಗಾಗಿ ಶ್ರೀಗಲ್ಲೆ ದುರ್ಗಾಂಬಿಕಾ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯಿತು.
ಲಸಿಕಾ ಕೇಂದ್ರಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿ ಲಸಿಕೆ ಪಡೆದ ಆನೆಕೊಂಡದ ನಾಗರಿಕರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಎ.ಆರ್.ರೇವಣಸಿದ್ದಪ್ಪ (ಪುಟ್ಟಪ್ಪ) ಕಾಂಗ್ರೆಸ್ ಮುಖಂಡರುಗಳಾದ ಎಂ.ಸಿ.ನಾಗರಾಜ್, ಎ.ಎಂ.ತಿಪ್ಪೇಶ್, ಚನ್ನಬಸಪ್ಪ ಬಿ, ಶಿವಪ್ಪ ಹೆಚ್.ಬಿ., ರೇವಣಸಿದ್ದಪ್ಪ, ಎಂ.ಸಿ.ಪ್ರಕಾಶ್, ಕೆ.ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.