PDS RICE:ಅಕ್ರಮ ಪಡಿತರ ಅಕ್ಕಿ ಹಾಗೂ ಕ್ಯಾಂಟರ್ ಲಾರಿ ವಶಕ್ಕೆ ಪಡೆದ ಎಸ್ ಪಿ ರಿಷ್ಯಂತ್ ನೇತೃತ್ವದ ದಾವಣಗೆರೆ ಗ್ರಾಮಾಂತರ ಪೊಲೀಸ್ ತಂಡ

ದಾವಣಗೆರೆ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಾಳ್ ಟೋಲ್ ಬಳಿ ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು, ಅವರಿಂದ 1.50 ಲಕ್ಷ ಮೌಲ್ಯದ 100 ಟನ್ ಅಕ್ಕಿಯನ್ನು, ಹಾಗೂ ಕೃತ್ಯಕ್ಕೆ ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗುರುರಾಜ್ (ಗುರು) (47), ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವಾಹನ ಚಾಲಕ ವಿಜಯ್ (32) ಬಂಧಿತ ಆರೋಪಿಗಳಾಗಿದ್ದು, ಇವರು ರಾತ್ರಿ 11:30 ರ ಸುಮಾರಿಗೆ ಹೆಬ್ಬಾಳ್ ಟೋಲ್‌ನಿಂದ ಲಾರಿಯಲ್ಲಿ 50 ಕೆಜಿ ತೂಕದ 200 ಚೀಲಗಳನ್ನು ಸಾಗಿಸುತ್ತಿರುವುದು ಕಂಡುಬಂದಿದ್ದು, ಅವರನ್ನು ವಿಚಾರಿಸಿದಾಗ ಅಲ್ಲಿಂದ ಪರಾರಿ ಆಗಲು ಯತ್ನಿಸಿದ್ದಾರೆ.

ನಂತರ ಅವರನ್ನು ಹಿಡಿದು ಕರೆ ತಂದಾಗ ಯಾವುದೇ ದಾಖಲೆ ಇಲ್ಲದೇ ಪಡಿತರ ಅಕ್ಕಿಯೆಂದು ಬಾಯ್ಬಿಟ್ಟಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ದಾವಣಗೆರೆ ನಗರದಲ್ಲಿ ಡಿ ಸಿ ಆರ್ ಬಿ ಪೊಲೀಸ್ ತಂಡ ಕೂಡ ಅಕ್ರಮ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿತ್ತು. ದಾವಣಗೆರೆ ಜಿಲ್ಲೆಯ ಪೊಲೀಸ್ ನೂತನ ಎಸ್ ಪಿ ಮಾರ್ಗದರ್ಶನದಲ್ಲಿ ಅಕ್ರಮ ಚಟುವಟಿಕೆಗಳನ್ನು ಹಾಗೂ ಅದರಲ್ಲ  ಶಾಮೀಲಾಗಿರುವ ವ್ಯಕ್ತಿಗಳನ್ನ ಯಾರ ಮೂಲಾಜಿಗೂ ಒಳಪಡದೆ ಒಂದೊಂದಾಗಿ ಪ್ರಕರಣವನ್ನ ಬೇದಿಸುತ್ತಿದ್ದಾರೆ.

ಇದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಸದ್ಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!