rain; ಮಳೆ, ರಸ್ತೆಗಳು ಬಂದ್, ಪರದಾಡಿದ ಜನರು
![](https://garudavoice.com/wp-content/uploads/2023/11/rain-1024x577.jpg)
ಹೊಳಲ್ಕೆರೆ, ನ.06: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ (rain) ಕೆರೆಯಂತಾಗಿದೆ.
ಪ್ರವಾಸಿ ಮಂದಿರದ ಪಕ್ಕದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೋಗಲೆಂದು ರಸ್ತೆ ನಿರ್ಮಿಸುವ ಸಲುವಾಗಿ ಕಳೆದ ಒಂದು ವರ್ಷದ ಹಿಂದೆ ತಗ್ಗು ತೆಗೆದು ದಪ್ಪ ಜಲ್ಲಿ ಹರಡಲಾಗಿತ್ತು. ಆದರೆ ಈ ವರೆಗೂ ಕಾಮಗಾರಿ ನಡೆಸದೆ ಉದಾಸೀನ ಮಾಡಲಾಗಿದೆ.ಇಷ್ಟೇ ಅಲ್ಲ ಅಲ್ಪ ಮಳೆಗೆ ಕೆರೆಯಂತೆ ನೀರು ನಿಂತಿರುವ ಕಾರಣ ರೈತ ಸಂಘದ ಕಚೇರಿ, ರೋಟರಿ ಕ್ಲಬ್, ಎಲ್ ಐಸಿ ಕಚೇರಿ, ಪತ್ರಕರ್ತರ ಭವನ, ಕಸಾಪ ಭವನಕ್ಕೆ ರಸ್ತೆ ಬಂದ್ ಆಗಿದೆ.
ಇಲ್ಲಿನ ಕಚೇರಿಗೆ ಹೋಗುವವರ ಪಾಡು ಸೊಂಟದುದ್ದದ ನೀರಿನಲ್ಲಿ ಬಟ್ಟೆ ಮೇಲೆತ್ತಿಕೊಂಡು ಹೋಗುವಂತಾಗಿದೆ. ಹೆಚ್ಚಿನ ಮಳೆ ಬಂದರೆ ಮುಗಿದೇ ಹೋಯ್ತು ಎನ್ನುತ್ತಾರೆ ಇಲ್ಲಿನ ನಾಗರಿಕರು.
siddaramaiah; ಕಾಂಗ್ರೆಸ್ ಸಿದ್ಧಾಂತ ಬೆಂಬಲಿಸಿ ಬರುವವರಿಗೆ ಸ್ವಾಗತ: ಮುಖ್ಯಮಂತ್ರಿ