ರಾಮಮಂದಿರ ನಿರ್ಮಾಣ ಯಶಸ್ಸು: ಮೋದಿಗೆ ಪತ್ರ ಮೂಲಕ ಅಭಿನಂದನೆ

ದಾವಣಗೆರೆ, ಫೆ.12- ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದ ಗಡಿಯಾರ ಕಂಬದ ಬಳಿ ಸಾರ್ವಜನಿಕರಿಂದ ಪತ್ರ ಬರೆಸುವ ಮೂಲಕ ಧನ್ಯವಾದ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ್, ಗುರು ಸೋಗಿ, ಕಿಶೋರ್ ಕುಮಾರ್, ಟಿಂಕರ್ ಮಂಜಣ್ಣ, ಬಿಜೆಪಿ ಮಹಿಳಾ ಮುಖಂಡರಾದ ಶಾರದ ರಾಯ್ಕರ್, ಆಟೋ ನಾಗರಾಜ್, ಮಹಾಂತೇಶ್, ಕುಮಾರ್, ಮೋಹನ್, ಈಶ್ವರ್, ಗಂಗಾಧರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!