ಲೋಕಲ್ ಸುದ್ದಿ

ಆರೋಪಿತರಿಂದ 3 ಲಕ್ಷ 6 ಸಾವಿರ ರೂ.ಬೆಲೆಯ ಆಭರಣ ವಶಪಡಿಸಿಕೊಂಡ  ಗ್ರಾಮಾಂತರ ಪೊಲೀಸ್ 

ಆರೋಪಿತರಿಂದ 3 ಲಕ್ಷ 6 ಸಾವಿರ ರೂ.ಬೆಲೆಯ ಆಭರಣ ವಶಪಡಿಸಿಕೊಂಡ  ಗ್ರಾಮಾಂತರ ಪೊಲೀಸ್ 

ದಾವಣಗೆರೆ : ಮನೆ ಕಳ್ಳತನ ಮತ್ತು ಸುಲಿಗೆ ಮಾಡಿದ್ದ ಆರೋಪಿತರನ್ನು ಬಂಧಿಸಿ ಅವರಿಂದ 3,06,000/- ರೂ ಬೆಲೆಯ ಬಂಗಾರದ ಆಭರಣಗಳನ್ನು ದಾವಣಗೆರೆಯ ಗ್ರಾಮಾಂತರ ಪೊಲೀಸ್ ವಶಪಡಿಸಿಕೊಂಡಿದ್ದಾರೆ.    ದಿನಾಂಕ:25/09/2022 ರಂದು ಪಿರ್ಯಾದಿ ರುದ್ರಮುನಿ ತಂದೆ ಈಶ್ವರಪ್ಪ, ಹೆಬ್ಬಾಳು ಗ್ರಾಮ ಇವರು ಠಾಣೆಗೆ ಹಾಜರಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಗಾಡೇಜ್ ನಲ್ಲಿದ್ದ 2,70,000/- ರೂ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಗುನ್ನೆ ನಂ:298/2022, ಕಲಂ: 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ನಂತರ ಮಾನ್ಯ ಪೊಲಿಸ್ ಅಧೀಕ್ಷಕರವರಾದ ಶ್ರೀ ಡಾ|| ಕೆ. ಅರುಣ್, ಐಪಿಎಸ್, ಹಾಗೂ ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಅರ್.ಬಿ ಬಸರಗಿ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಸವರಾಜ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ರವರಾದ ಶ್ರೀ ಲಿಂಗನಗೌಡ ನೆಗಳೂರ ಇವರು ಪಿಎಸ್ ಐ ಶ್ರೀ ಎ.ಆರ್ ಮುಂದಿನ ಮನಿ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್‌ಯುಸುಫ್ ಅತ್ತಾರ್, ರಾಜು ಲಮಾಣಿ, ವೀರೇಶ್, ಗಣೇಶನಾಯ್ಕ, ಬಸವರಾಜ ಇವರೊಂದಿಗೆ ಆರೋಪಿತರನ್ನು ಬಂಧಿಸಿದ್ದಾರೆ.

ಎ-ಹನುಮಂತಪ್ಪ @ ದೊಡ್ಡಮನಿ ಹನುಮಂತ, 38 ವರ್ಷ, ದೇವಾಂಗ ಜನಾಂಗ, ಹಮಾಲಿ ಕೆಲಸ, ವಾಸ:ಹೆಬ್ಬಾಳು ಗ್ರಾಮ, ದಾವಣಗೆರೆ ತಾಲ್ಲೂಕು, ಎ2-ಹಾಲೇಶಪ್ಪ ತಂದೆ ಅಂಜಿನಪ್ಪ, 48 ವರ್ಷ, ದೇವಾಂಗ ಜನಾಂಗ, ಟೀ ಅಂಗಡಿ ವ್ಯಾಪಾರ, ವಾಸ: ಮಂಡಲೂರು ಗಾಮ್ರ, ದಾವಣಗೆರೆ ತಾಲ್ಲೂಕು. ಹಾಲಿ ವಾಸ:ಭರಮಸಾಗರ, ಚಿತ್ರದುರ್ಗ ತಾಲ್ಲೂಕು ಇವರುಗಳನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ:53/2022, ಕಲಂ:394 ಐಪಿಸಿ ಪ್ರಕರಣವು ಸೇರಿದಂತೆ 02 ಪ್ರಕರಣಗಳಿಂದ ಕಳವು ಮತ್ತು ಸುಲಿಗೆ ಆಗಿದ್ದ 03,06,000/- ರೂ ಬೆಲೆಗೆ ಬಂಗಾರದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸದರಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಡಾ.ಕೆ. ಅರುಣ್, ಐಪಿಎಸ್, ರವರು ಶ್ಲಾಘಿಸಿರುತ್ತಾರೆ.

Click to comment

Leave a Reply

Your email address will not be published. Required fields are marked *

Most Popular

To Top