ಸರ್ಕಾರದ ನಿರ್ಲಕ್ಷ್ಯ ಮುಚ್ಚಿಡಲು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ – ಶಾಮನೂರು ಶಿವಶಂಕರಪ್ಪ
![](https://garudavoice.com/wp-content/uploads/2021/06/IMG-20210626-WA0013.jpg)
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 21ನೇ ವಾರ್ಡ್ನ ಬಸಾಪುರದ ನಾಗರೀಕರಿಗಾಗಿ ಬಸಾಪುರದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಲಸಿಕಾ ಕೇಂದ್ರಕ್ಕೆ ದಾವಣಗೆರೆ ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿ ಲಸಿಕೆ ಪಡೆದ ಬಸಾಪುರ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಸರ್ಕಾರ ಲಸಿಕೆ ಪೂರೈಸುವಲ್ಲಿ ವಿಫಲವಾಗಿದ್ದು, ನಿರ್ಲಕ್ಷ್ಯ
ವಹಿಸಿ ಇಂದು ಕಾಂಗ್ರೆಸ್ ವಿರುದ್ಧ ವೃಥಾ ಆರೋಪ ಮಾಡುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ, ಮಾಜಿ ಉಪ ಮೇಯರ್ ಗೌಡ್ರ ರಾಜಶೇಖರ, ಎಸ್. ಸುರೇಂದ್ರಪ್ಪ, ಸಿ. ಮಹೇಶ್ವರಪ್ಪ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕೆ.ಎಲ್.ಹರೀಶ್ ಬಸಾಪುರ, ಗ್ರಾಮದ ಮುಖಂಡರುಗಳಾದ ಕಳುರ್ ಮಹೇಶ್ವರಪ್ಪ, ನಾಗೇಂದ್ರಚಾರ್,ಎನ್.ಎಂ. ಕೊಟ್ರಯ್ಯ, ವಿಜಯ್ಕುಮಾರ್, ಬಿ.ಕೆ. ದೇವೇಂದ್ರಪ್ಪ, ಬಿ.ಕೆ. ಕರಿಬಸಪ್ಪ, ಅಕ್ಕಿ ರಾಜು, ಬಸವರಾಜಯ್ಯ, ವಿಜಯ್ ಕುಮಾರ್, ಬಾತಿ ಜಯರಾಜ್, ಚೌಡಪ್ಪ, ವೀರೇಶ್, ಹನುಮಂತಪ್ಪ, ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು.