ವಿಶೇಷ ಪ್ಯಾಕೇಜ್ ಘೋಷಣೆಗಾಗಿ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದಿಂದ ಡಿಸಿ ಮೂಲಕ ಸರ್ಕಾರಕ್ಕೆ ಮನವಿ

 

ದಾವಣಗೆರೆ: ಅಸಂಘಟಿತ ಕಾರ್ಮಿಕ ವಲಯವು ಕೊರೊನಾ ಕಷ್ಟ ಕಾಲದಲ್ಲಿ ಅತ್ಯಂತ ತೊಂದರೆಗೀಡಾಗಿದ್ದು ಕೇಂದ್ರ ಸರ್ಕಾರವು ಈ ಕೂಡಲೇ ವಿಶೇಷ ಪ್ಯಾಕೇಜನ್ನು ಘೋಷಿಸಬೇಕೆಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾದ ನಂಜಾ ನಾಯ್ಕ ಕಬ್ಬಳ  ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೊರೊನ ಎರಡನೇ ಅಲೆಯಲ್ಲಿ ಅಸಂಘಟಿತ ಕಾರ್ಮಿಕರ ವಲಯವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಇವರ ಸಹಾಯಕ್ಕೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲದೆ ಇರುವುದರಿಂದ ಅನೇಕ ಕುಟುಂಬಗಳು ಬೀದಿಪಾಲಾಗಿವೆ . ಈಗಾಗಲೇ ವಿವಿಧ ವಲಯಗಳಿಗೆ ಪ್ಯಾಕೇಜನ್ನು ಘೋಷಿಸಿದ ಹಾಗೆ ಅಸಂಘಟಿತ ವಲಯಕ್ಕೂ

ಕೂಡಲೇ ವಿಶೇಷವಾದ ಪ್ಯಾಕೇಜನ್ನು ಘೋಷಿಸಿ ನೊಂದ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಿ.ಹೆಚ್ ವೀರಭದ್ರಪ್ಪ ಮಾತನಾಡಿ ಸಂಕಷ್ಟ ಕಾಲದಲ್ಲಿ ಎಲ್ಲಾ ವಲಯಗಳಿಗೆ ಪ್ಯಾಕೇಜನ್ನು ಘೋಷಿಸಿರುವ ಸರ್ಕಾರಗಳು ಅಸಂಘಟಿತ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದ್ದು ಇದರಿಂದಾಗಿ ಅನೇಕ ಕುಟುಂಬಗಳಿಗೆ ಅತೀವ ತೊಂದರೆಯಾಗಿದೆ ಕೂಡಲೇ ಸರ್ಕಾರಗಳು ನಮ್ಮ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಂಡು ಸಹಾಯಹಸ್ತ ಚಾಚುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ,ಕಾರ್ಯದರ್ಶಿ ಹರೀಶ್. ಹೆಚ್, ಮುಖಾಂಡರುಗಳಾದ ಸುರೇಶ್.ಎಂ.ಜಾಧವ್,ಮಹಬೂಬ್ ಬಾಷಾ, ಮೊಹಮ್ಮದ್ ಜಿಕ್ರಿಯಾ,ರಿಯಾಜುದ್ದೀನ್, ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!