ಲೋಕಲ್ ಸುದ್ದಿ

ಶರಣ ಸಂಸ್ಕೃತಿ ಹಾಗೂ ಧಾರ್ಮಿಕ ಕಲ್ಪವೃಕ್ಷಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಸವಣೂರು: ಹಾವೇರಿ ಜಿಲ್ಲೆಯ ಸವಣೂರಿನ ದೊಡ್ಡಹುಣಸೇ ಕಲ್ಮಠದಲ್ಲಿ ಇದೆ ತಿಂಗಳ ಫೆಬ್ರವರಿ ದಿನಾಂಕ: 25 ರಿಂದ 26, 27 ವರೆಗೆ ಮೂರು ದಿವಸಗಳ ವರೆಗೆ 46ನೇ ಸ್ಮರಣೋತ್ಸವ ಹಾಗೂ “ಶರಣ ಸಂಸ್ಕೃತಿ ಸಮಾರಂಭ ಮತ್ತು “ಕಲ್ಪವೃಕ್ಷಶ್ರೀ” ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭವನ್ನು ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ಇವರಿಂದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಸಮಾರಂಭವನ್ನು ಸನ್ಮಾನ್ಯ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳು ಇವರು ಉಧ್ಭಾಟನೆ ಮಾಡುವರು, ಪ್ರಾಥನೆ ಅಕ್ಕನಬಳಗದ ತಾಯಿಂದಿರು, ವಚನ ಸಂಗೀತ ಪರಮೇಶ್ವರ ಯಲವಗಿ ಗವಾಯಿಗಳು, ಲಕ್ಷೇಶ್ವರ. ಜಾನಪದ ನೃತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿಯ ಸಹೋಗದ ಶ್ರೀಮತಿ ಕವಿತಾ ಚಂ. ಕುಳೇನೂರು ಗಾನಸಿರಿ ಜಾನಪದ ತಂಡ, ಹತ್ತಿಮತ್ತೂರು. ಉಪನ್ಯಾಸ: ನಾಗಪ್ಪ ಬೆಂತೂರು. ನಿರೂಪಣೆ ಡಾ. ವೀರೇಶ ಹಿತ್ತಲಮನಿ ಪ್ರಾಚಾರ್ಯರು. ಹಾಗೂ ಆರ್. ಎನ್. ತೊಂಡೂರು. ಪ್ರಾಚಾರ್ಯರು.

ಈ ಕಾರ್ಯಕ್ರಮಕ್ಕೆ ಶ್ರೀ ಮ.ನಿ.ಪ್ರ. ನಾಗಭೂಷಣ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ಸಂಗನಬಸವ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ.ಸಂಗಮೇಶ್ವರ ಮಹಾಸ್ವಾಮಿಗಳು. ರಾಯಪ್ಪ ಹುಸಗಿ, ಪುಟ್ಟಯ್ಯ ಎಸ್. ಕಲ್ಮಠ, ಅನಿಲಕುಮಾರ ಜಿ. ಶಿವಪುತ್ರಪ್ಪ ಈ ಸಂಪಗಾಯಿ, ಶ್ರೀಮತಿ ಶೈಲಾ ಹ. ಮುದಿಗೌಡ್ರ, ಹಾಗೂ

ಧಾರ್ಮಿಕ ಸಭೆ ಸಮಾರಂಭಕ್ಕೆ ಇನ್ನೂ ಹಲವಾರು

ಮಹಾಸ್ವಾಮಿಗಳು ಮತ್ತು ಮುಖ್ಯಸ್ಥರಾಗಿ ಭಾಗವಹಿಸುವರು ಎಂದು ಸವಣೂರಿನ ದೊಡ್ಡಹುಣಸೇ ಮಠದ ಶ್ರೀ ಮ.ನಿ.ಪ್ರ. ಕುಮಾರ ಮಹಾಸ್ವಾಮಿಗಳು ಅವರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!