ಎಸ್ ಎಸ್ ರಿಂದ ದಾವಣಗೆರೆ ವಕೀಲರ ಭವನದಲ್ಲಿ ವಕೀಲರಿಗೆ ಲಸಿಕಾ ಶಿಬಿರ

ದಾವಣಗೆರೆ: ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಮತ್ತುಎಸ್.ಎಸ್. ಮಲ್ಲಿಕಾರ್ಜುನ್‌ ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ  ನಗರದ ವಕೀಲರ ಭವನದಲ್ಲಿ ನಡೆಯಿತು.

ಲಸಿಕಾ ಕೇಂದ್ರಕ್ಕೆ ದಾವಣಗೆರೆ || ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಭೇಟಿ ನೀಡಿ ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಶಾಮನೂರು ಶಿವಶಂಕರಪ್ಪನವರಂತ ಸದೃಹಯದವರು ದಾವಣಗೆರೆಯಲ್ಲಿರುವುದು ನಮ್ಮೆಲ್ಲರ ಪುಣ್ಯ ಎಂದು ಪ್ರಶಂಶಿಸಿದರು.

ಸರ್ಕಾರ ಲಸಿಕೆ ನೀಡುವುದರ ಜೊತೆ ಜೊತೆಗೆ ಶಾಮನೂರು ಶಿವಶಂಕರಪ್ಪನವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ಖರೀದಿಸಿ ದಾವಣಗೆರೆ ಜನತೆಗೆ ಉಚಿತವಾಗಿ ಲಸಿಕೆ ನೀಡುವ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಅವರು ಮಾತನಾಡಿ ಶಾಮನೂರು ಶಿವಶಂಕರಪ್ಪನವರು ದೈವಿಸ್ವರೂಪದಂತೆ ದಾವಣಗೆರೆ ಜನತೆಯ ಜೀವ ಕಾಪಾಡಿದ ಸಂಜೀವಿನಿ ಎಂದರು.

ವಕೀಲರಾದ ಎಸ್.ಪರಮೇಶ್ ಮತ್ತು ರಿಜ್ವಿಖಾನ್ ಮಾತನಾಡಿ ಶಾಮನೂರು ಶಿವಶಂಕರಪ್ಪನವರ ಮಾತೃ ಹೃದಯದಿಂದಲೇ ಇಂದು ದಾವಣಗೆರೆಯಲ್ಲಿ ಮನೆ ಮಾತಾಗಿದ್ದಾರೆ. ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ನುಡಿದಂತೆ ನಡೆದ ನಾಯಕರು ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕರ‍್ಯದರ್ಶಿ ಲೋಕಿಕೆರೆ ಪ್ರದೀಪ್, ಕೆ.ಕೆ.ರಂಗಸ್ವಾಮಿ, ವಿ.ಗೋಪಾಲ್, ಎನ್.ಎಂ.ಆಂಜನೇಯ, ಹೆಚ್.ಎಸ್.ಯೋಗೇಶ್, ದೇವರಾಜ್, ಜಂಟಿ ಕರ‍್ಯದರ್ಶಿ ಬಸವರಾಜ್, ರಾಜನಹಳ್ಳಿ ಸುರೇಶ್, ಸೈಯದ್ ಖಾದರ್, ಸುಷ್ಮಾ ಪಾಟೀಲ್, ಮಂಜುಳಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!