ಸ್ಥಳೀಯ ಮುಖಂಡರಿಗೆ ಮಾಜಿ ಸಚಿವ ಎಸ್ ಎಸ್ ಎಂ ಏನು ಕಿವಿಮಾತು ಹೇಳಿದ್ರು..?

 

ದಾವಣಗೆರೆ: ಎಲ್ಲಾ ನಾಗರೀಕರಿಗೂ ಜಾತಿ-ಧರ್ಮ, ಪಕ್ಷ ಬೇಧ ಮಾಡದೇ ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಗಮನ ಹರಿಸಿ ಎಂದು ಸ್ಥಳೀಯ ಮುಖಂಡರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.

ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದ ನಿಟುವಳ್ಳಿಯ ಜಯನಗರದಲ್ಲಿ ನಡೆಯಿತು. ಶಿಬಿರಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಜನರ ಜೀವ ಮುಖ್ಯ. ಲಸಿಕೆಯ ವಿಚಾರದಲ್ಲೂ ಪಕ್ಷ, ಜಾತಿಯನ್ನು ತರದೇ ಎಲ್ಲರಿಗೂ ಲಸಿಕೆ ಕೊಡಿಸಲು ಗಮನ ನೀಡಿ ಎಂದು ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

ಲಸಿಕೆ ಪಡೆದ ಕಾಂಗ್ರೆಸ್ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಆರ್.ಎಸ್.ಶೇಖರಪ್ಪ, ಆರ್.ಹೆಚ್. ನಾಗಭೂಷಣ್, ಡಾ|| ರಮೇಶ್, ಪ್ರವೀಣ್ ಹುಲ್ಲುಮನೆ, ಆರ್.ಎಸ್.ರಾಕೇಶ್, ಪ್ರಶಾಂತ್(ಪಚ್ಚಿ), ಶ್ಯಾಮ್ ಪೈಲ್ವಾನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!