ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲೆಸೆತ..!?

ಬಳ್ಳಾರಿ : ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ನಡೆದಿದ್ದು, ಈ ವೇಳೆ ಮಂಗ್ಲಿ ತಂಡದವರಿಂದ ರಸಮಂಜರಿ ಕರ್ಯಕ್ರಮ ನಡೆದಿತ್ತು. ಮಂಗ್ಲಿ ಗಾಯನ ಮುಗಿಸಿ ತೆರಳುವಾಗ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ಮಂಗ್ಲಿಯನ್ನು ನೋಡಲು ಮುಗಿ ಬಿದ್ದಿದ್ದಾರೆ. ಈ ವೇಳೆ ಯುವಕರ ಗುಂಪೊಂದು ಮೇಕಪ್ ಟೆಂಟ್ಗೆ ನುಗ್ಗಿದ್ದು, ಮುನ್ನೆಚ್ಚರಿಕೆಯಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನರ್ಮಾಣಗೊಂಡು ಕೆಲವು ಕಿಡಿಗೇಡಿಗಳು ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಲ್ಲೆಸೆದಿದ್ದಾರೆ. ಇದರಿಂದ ಕಾರಿನ ಮುಂಭಾಗದ ಗಾಜಿಗೆ ಹಾನಿ ಉಂಟಾಗಿದೆ. ಖ್ಯಾತ ಸಂಗೀತ ನಿರ್ಜದೇಶಕ ಅರ್ಜುನ್ ಜನ್ಯ ತಂಡದಿಂದ ರಸಮಂಜರಿ ಹಾಗೂ ಎಂ.ಡಿ.ಪಲ್ಲವಿ ತಂಡದವರಿಂದ ಗೀತಗಾಯನ ಕರ್ಯಕ್ರಮವೂ ಇತ್ತು. ನಿರೂಪಕಿ ಅನುಶ್ರೀ ನಿರೂಪಣೆ ಮಾಡಿದ್ದರು. ಇಂದೂ ಕೂಡಾ ಬಳ್ಳಾರಿ ಉತ್ಸವ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!