ಮೂರನೇ ಅಲೆಗೆ ಶಾಸಕರು,ಸಂಸದರು,ಜಿಲ್ಲಾಡಳಿತ, ಮುಂಜಾಗೃತಾ ಕ್ರಮ ಕೈಗೊಳ್ಳಿ – ಎಸ್ ಎಸ್ ಮಲ್ಲಿಕಾರ್ಜುನ್ ಕಿವಿಮಾತು
![](https://garudavoice.com/wp-content/uploads/2021/06/Shamanur-Shivashankarappa-91-birthday-garudavoice.jpg)
ದಾವಣಗೆರೆ: ಕರೋನಾ ಮೂರನೇ ಅಲೆ ನಿಯಂತ್ರಿಸಲು ಇಲ್ಲಿನ ಸಂಸದರು, ಶಾಸಕರು, ಜಿಲ್ಲಾಮಂತ್ರಿಗಳು ಮತ್ತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕೆಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇವರೆಲ್ಲರ ನಿರ್ಲಕ್ಷ್ಯದಿಂದ ಕೋವಿಡ್ ಎರಡನೇ ಅಲೆಯಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿದ್ದು, ಸಂಸದರು ದೆಹಲಿಗೆ ಹೋದಾಗ ಅಗತ್ಯ ವೈದ್ಯಕೀಯ ಸವಲತ್ತುಗಳನ್ನು ಜಿಲ್ಲೆಗೆ ತರಬೇಕೆಂದು ತಿಳಿಸಿದರು.
3 ನೇ ಅಲೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಇರುವುದಾಗಿ ತಜ್ಞರು ಅಂದಾಜಿಸಿದ್ದು, ಲಸಿಕಾಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನಾವು ನಮ್ಮ ಕುಟುಂಬದಿಂದ ಲಸಿಕಾ ಶಿಬಿರಗಳನ್ನು ಆಯೋಜಿಸಿದ್ದು, ಇದರಲ್ಲಿ ಪಕ್ಷ ರಾಜಕಾರಣ ಮಾಡದೆ ಎಲ್ಲರೂ ಜನರ ಸುರಕ್ಷತೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ನಾವು ನಮ್ಮ ಕಾಂಗ್ರೆಸ್ ನ ಪಾಲಿಕೆ ಸದಸ್ಯರಿಗೆ ಈಗಾಗಲೇ ತಿಳಿಸಿದ್ದು, ಅನ್ಯ ಪಕ್ಷದ ವಾರ್ಡುಗಳೆಂದು ಕಡೆಗಣಿಸದೆ ಜನರ ರಕ್ಷಣೆಗಾಗಿ ಲಸಿಕೆ ನೀಡಬೇಕೆಂದು ಸೂಚಿಸಿದ್ದೇವೆ ಎಂದರು.
ಇಲ್ಲಿನ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಸದರು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮೂರನೇ ಅಲೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.