ಉಚಿತ ಲಸಿಕಾ ಅಭಿಯಾನ; ವಿನೋಬನಗರ ನಾಗರೀಕರಿಗೆ ಲಭ್ಯ

ದಾವಣಗೆರೆ:  ಪಾಲಿಕೆಯಿಂದ ಕೋವಿಶೀಲ್ಡ್ ಲಸಿಕಾ ಅಭಿಯಾನ  ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಿತು. ಈ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಮೊದಲ ಹಾಗೂ ಮೊದಲ ಲಸಿಕೆ ಪಡೆದು 84 ದಿನಗಳ ಪೂರೈಸಿದವರಿಗೆ 2ನೇ ಡೋಸ್ ಲಸಿಕೆ ನೀಡಲಾಯಿತು.ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದ ಅಧ್ಯಕ್ಷ ರಮಣಲಾಲ್ ಸಂಘವಿ, ಬ್ಯಾಂಕಿನ ಅಧ್ಯಕ್ಷ ಎನ್.ಎ.ಮುರುಗೇಶ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯ ಶಿವಾನಂದ, ಕಾರ್ಯಕರ್ತರಾದ ಪ್ರವೀಣಕುಮಾರ, ಪ್ರದೀಪ್, ದಾನಪ್ಪ, ಮಂಜುನಾಥ, ಕಿರಣ, ಪ್ರಶಾಂತ, ಡಿ.ಎಂ.ಕಾಂತರಾಜ, ಉಮೇಶ, ರವಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!