ಕಾರ್ಮಿಕರ ಪಾಲಿಗೆ ನಿರಾಶಾದಾಯಕ ಬಜೆಟ್ – ರಾಘವೇಂದ್ರ ನಾಯರಿ

ಬಜೆಟ್ - ರಾಘವೇಂದ್ರ ನಾಯರಿ

ದಾವಣಗೆರೆ: ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ, ಬಿಸಿಯೂಟ ತಯಾರಕರ ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನದಲ್ಲಿ ರೂ.1000 ಹೆಚ್ಚಳದ ಘೋಷಣೆ ಮಾಡಲಾಗಿದೆ. ಆದರೆ ಈ ಕನಿಷ್ಠ ಹೆಚ್ಚಳ ಆ ಮಾತೆಯರ ಹೊಟ್ಟೆ ತುಂಬಿಸುವಲ್ಲಿ ಅಥವಾ ಗೌರವಯುತವಾದ ಜೀವನ ನಡೆಸಲು ಅನುಕೂಲ ಮಾಡುವುದರಲ್ಲಿ ವಿಫಲವಾಗಿದೆ. ಎಐಟಿಯುಸಿ ಸಂಘಟನೆ ಕನಿಷ್ಠ ವೇತನ ರೂ.31500/- ಜಾರಿಗೆ ತರಬೇಕು, ರೂ.5000/- ಪಿಂಚಣಿ ನೀಡಬೇಕು ಹಾಗೂ ಇವರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಹೋರಾಟ ಮಾಡಿತ್ತು. ಆದರೆ ಈ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸದೇ ಕಾರ್ಮಿಕ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ನಮ್ಮ ಸಂಘಟನೆಯ ಹೋರಾಟ ಮುಂದುವರೆಯಲಿದೆ.

ಧನ್ಯವಾದಗಳೊಂದಿಗೆ,

ಕೆ.ರಾಘವೇಂದ್ರ ನಾಯರಿ,ಜಿಲ್ಲಾಧ್ಯಕ್ಷರು, ಎಐಟಿಯುಸಿ ಕಾರ್ಮಿಕ ಸಂಘಟನೆ.

Leave a Reply

Your email address will not be published. Required fields are marked *

error: Content is protected !!