ಅಥಣಿ ಎಸ್. ವೀರಣ್ಣ, ಸಿದ್ಧಗಂಗಾ ಶಿವಣ್ಣ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
![](https://garudavoice.com/wp-content/uploads/2023/02/IMG-20230225-WA0010-1024x1024.jpg)
ಅಥಣಿ ಎಸ್. ವೀರಣ್ಣ, ಸಿದ್ಧಗಂಗಾ ಶಿವಣ್ಣ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಹತ್ತನೇ ವಾರ್ಷಿಕ ಘಟಿಕೋತ್ಸವ ಫೆ.28ರಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ದಾವಣಗೆರೆಯ ವಾಣಿಜ್ಯೋದ್ಯಮಿ ಅಥಣಿ ಎಸ್.ವೀರಣ್ಣ, ಸಿದ್ಧಗಂಗಾ ಶಾಲೆಯ ದಿ. ಎಂ.ಎಸ್. ಶಿವಣ್ಣ ಹಾಗೂ ಹರಪನಹಳ್ಳಿಯ ಟಿ.ಎಂ. ಚಂದ್ರಶೇಖರಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಪ್ರೊ.ಕುಂಬಾರ ಹೇಳಿದರು.
ದಿ.ಎಂ.ಎಸ್. ಶಿವಣ್ಣ ಅವರಿಗೆ (ಮರಣೋತ್ತರವಾಗಿ) ಗೌರವ ಡಾಕ್ಟರೇಟ್ ನೀಡಲಾಗುವುದು ಎಂದವರು ಹೇಳಿದರು.