ಶಾಮನೂರು ಕುಟುಂಬದಿಂದ ಗುರುಬಕ್ಕೇಶ್ವರ ಸ್ವಾಮಿಗೆ ಬಂಗಾರದ ಚೌಕ.
![](https://garudavoice.com/wp-content/uploads/2022/01/IMG-20220114-WA0032-1024x576.jpg)
ದಾವಣಗೆರೆ: ನಗರದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಗೆ ಶಾಮನೂರು ಕುಟುಂಬದಿಂದ ಬಂಗಾರದ ಚೌಕ ಹಾಗೂ ಕಾಣಿಕೆಯನ್ನು ಸಮರ್ಪಿಸಲಾಯಿತು.
ಇಂದು ಸಂಜೆ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಚೌಕ ಹಾಗೂ ಕಾಣಿಕೆಯನ್ನು ಸಮರ್ಪಿಸಿ ಸ್ವಾಮಿಯ ಆರ್ಶಿವಾದ ಪಡೆದರು. ಈ ವೇಳೆ ಶಾಮನೂರು ಕುಟುಂಬದ ಉದ್ಯಮಿ ಎಸ್.ಎಸ್.ಗಣೇಶ್, ಡಾ.ಎಸ್.ಬಿ.ಮುರುಗೇಶ್, ಸೊಸೆಯಂದಿರಾದ ಶ್ರೀಮತಿ ಪ್ರೀತಿ ಬಕ್ಕೇಶ್, ಶ್ರೀಮತಿ ರೇಖಾ ಗಣೇಶ್, ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಹಾಗೂ ಶ್ರೀಮತಿ ಅಭಿಷೇಕ್ ಹಾಗೂ ಶಾಮನೂರು ಕುಟುಂಬದ ಆತ್ಮೀಯರಾದ ಹಿರಿಯ ಲೆಕ್ಕ ಪರಿಶೋಧಕರಾದ ಅಥಣಿ ವೀರಣ್ಣ ದಂಪತಿಗಳು ಉಪಸ್ಥಿತರಿದ್ದು, ಬಕ್ಕೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಯಜಮಾನ್ ಮೋತಿ ವೀರಣ್ಣ, ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮಾಗಾನಹಳ್ಳಿ ಶಿವಾನಂದಪ್ಪ, ಉಪಾಧ್ಯಕ್ಷ ಮಾಗಾನಹಳ್ಳಿ ಜಯಣ್ಣ, ಖಜಾಂಚಿ ಮಾಗಾನಹಳ್ಳಿ ವಿನಯ್ ಮತ್ತಿತರರಿದ್ದರು.