ದಾವಣಗೆರೆ ಪತ್ರಕರ್ತ ಬಸವರಾಜ್ ಬೈಕ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.! ಐವರ ಬಂಧಿಸಿದ ಪೊಲೀಸ್ ತಂಡಕ್ಕೆ ಶ್ಲಾಘಿಸಿದ ಪತ್ರಕರ್ತರು

ದಾವಣಗೆರೆ: ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದ ಪತ್ರಕರ್ತ ಪಿ. ಬಸವರಾಜ್ ಅವರ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಮೊಬೈಲ್‌ ಮತ್ತು ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ನಡೆದಿತ್ತು.

ದಾವಣಗೆರೆಯಿಂದ ದೊಡ್ಡಬಾತಿ ಗ್ರಾಮದ ತಮ್ಮ ಮನೆಗೆ ಹೊರಟಿದ್ದಾಗ ಮಾರ್ಗಮಧ್ಯೆಯ ಬಾತಿ ಕೆರೆ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪಿ. ಬಸವರಾಜ್ ಅವರನ್ನು ಎಸ್.ಎಸ್. ಹೈಟೆಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

24 ಗಂಟೆಯೊಳಗೆ ಆರೋಪಿಗಳು ವಶಕ್ಕೆ: ಪ್ರಕರಣ ನಡೆದು 24 ಗಂಟೆಯೊಳಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಿದ್ದರು.
ದಾವಣಗೆರೆಯಿಂದ-ದೊಡ್ಡ ಬಾತಿ ಗ್ರಾಮದವರೆಗೆ ವಿವಿಧ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಮೊಬೈಲ್‌ ಟವ‌ರ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ:
ಬಸವರಾಜ ದಾವಣಗೆರೆಯಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದರು,
25/01/2024 ರಂದು ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ರಾತ್ರಿ 12-45 ರಿಂದ 01-00 ಎ.ಎಂ
ಗಂಟೆ ಸಮಯದಲ್ಲಿ ದಾವಣಗೆರೆಯಿಂದ ವಾಪಸ್ ಹೋಗುತ್ತಿರುವಾಗ ಬಾತಿ ಕೆರೆಯ ಬಳಿ ಯಾರೋ ನಾಲ್ಕು ಜನ ಹುಡುಗರು ಬಸವರಾಜ್ ಮೇಲೆ ಹಲ್ಲೆ ಮಾಡಿ 50/- ರಿಂದ 100/- ರೂ ನಗದು ಹಣ ಹಾಗೂ ಒಂದು ಸ್ಯಾಮ್ ಸಂಗ್ ಮೊಬೈಲ್ ನ್ನು
ಕಿತ್ತುಕೊಂಡು ಹೋಗಿದ್ದರು, ಹಲ್ಲೆಗೊಳಗಾಗಿದ್ದ ಬಸವರಾಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು
ಅವರು ನೀಡಿದ ಹೇಳಿಕೆ ದೂರಿನ ಮೇಲೆ ದಾವಣಗೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿ ಮಾಡಲಾಗಿತ್ತು.

ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್, ಐಪಿಎಸ್ ಹಾಗೂ ಮಾನ್ಯ ಅಪರ ಪೊಲೀಸ್ ಅಧೀಕ್ಷಕರವರಾದ ಶ್ರೀ ವಿಜಯ್ ಕುಮಾರ್ ಸಂತೋಷ್, ಹಾಗೂ ಶ್ರೀ ಮಂಜುನಾಥ ರವರ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಸವರಾಜ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ರವರು ಶ್ರೀ ಕಿರಣ್ ಕುಮಾರ್ ಇ.ವೈ ರವರು ಪಿಎಸ್‌ಐ ಶ್ರೀ ಜೋವಿತ್ ರಾಜ್ ಮತ್ತು ಡಿಸಿಐಬಿ ವಿಭಾಗದ ಸಿಬ್ಬಂದಿಯವರಾದ ಮಜೀದ್, ರಾಘವೇಂದ್ರ,, ಆಂಜನೇಯ, ಬಾಲರಾಜ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್‌ ಯುಸುಫ್ ಅತ್ತಾರ್, ವೀರೇಶ್ ಇವರೊಂದಿಗೆ ಸೇರಿ ದಾವಣಗೆರೆಯಲ್ಲಿ ಆರೋಪಿಗಳನ್ನ ಶುಕ್ರವಾರ ಸಂಜೆಯೋಳಗೆ ತಮ್ಮ ಚಾಕಚಕ್ಯತೆಯಿಂದ ಬಂದಿಸಿದ್ದಾರೆ.

ಆರೋಪಿಗಳ ವಿವರ:
ಎ1-ಮೈಲಾರಿ, 18ವರ್ಷ, ಎ2-ಪೃಥ್ವಿನಾಯ್ಕ. ಎ3-ಸಂಜಯ್ ಎ4- ವೀರೇಶ ಹಾಗೂ ಒಬ್ಬ ಕಾನೂನು. ಸಂಘರ್ಷಕ್ಕೆ ಒಳಗಾದ ಬಾಲಕ ನನ್ನು ವಶಕ್ಕೆ ಪಡೆದು ಸದರಿ ಪ್ರಕರಣದಲ್ಲಿ ಪಿರ್ಯಾದಿಯವರಿಂದ ಕಿತ್ತುಕೊಂಡು ಹೋಗಿದ್ದ 50/- ರೂ ನಗದು ಹಣ ಹಾಗೂ 16,000/- ರೂ ಬೆಲೆ ಬಾಳುವ ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ್ದ 02 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ ಎಂದು ಮಾಹಿತಿ ತಿಳಿಸಿದ್ದಾರೆ.

ಸದರಿ ಆರೋಪಿತರು ಈಗ್ಗೆ 5 ದಿನಗಳ ಹಿಂದೆ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಹೆದರಿಸಿ 01 ಮೊಬೈಲ್ ಹಾಗೂ ಹಣ ಕಿತ್ತುಕೊಂಡಿರುವುದಾಗಿ ಹಾಗೂ ಈಗ್ಗೆ ಸುಮಾರು 03 ದಿನಗಳ ಹಿಂದೆ ದಾವಣಗೆರೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯ ಅವರಗೆರೆ ಹತ್ತಿರ ಹಳೇ ಪಿ.ಬಿ ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಅಡ್ಡಗಟ್ಟಿ ನಿಲ್ಲಿಸಿ ಒಂದು ಮೊಬೈಲ್ ಕಿತ್ತುಕೊಂಡಿರುವ ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾರೆ. ಇವರಿಂದ ಮೊಬೈಲ್ ಪೋನ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಒಟ್ಟು 03 ಪ್ರಕರಣಗಳು ಪತ್ತೆಯಾಗಿದ್ದು ಆರೋಪಿತರನ್ನು ಹಾಗೂ ಕಾ.ಸ. ಬಾಲಕನನ್ನು ಕಲಂ:395 ಐಪಿಸಿ ಅಡಿಯಲ್ಲಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸದರಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ, ಐಪಿಎಸ್, ರವರು ಶ್ಲಾಘಿಸಿರುತ್ತಾರೆ.

ಪತ್ತೆ ಹಚ್ಚಿದ ಪೋಲೀಸ್ ಕಾರ್ಯಕ್ಕೆ ದಾವಣಗೆರೆ ಜಿಲ್ಲೆಯ ಪತ್ರಕರ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!