ಗಿಡ ಬೆಳೆಸಿ ; ನಾಡು ಉಳಿಸಿ – ವನ ಮಹೋತ್ಸವ ಕಾರ್ಯಕ್ರಮ
![ಗಿಡ ಬೆಳೆಸಿ ; ನಾಡು ಉಳಿಸಿ - ವನ ಮಹೋತ್ಸವ ಕಾರ್ಯಕ್ರಮ](https://garudavoice.com/wp-content/uploads/2023/07/kendriys-vidyalaya.jpg)
ದಾವಣಗೆರೆ : ಗಿಡ ಬೆಳೆಸಿ ನಾಡು ಉಳಿಸಿ ಎಂಬ ಶೀರ್ಷಿಕೆಯೊಂದಿಗೆ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಕೇಂದ್ರೀಯ ವಿದ್ಯಾಲಯ ದಾವಣಗೆರೆ ಇಲ್ಲಿ ವನಮೋತ್ಸವ ಕಾರ್ಯಕ್ರಮವನ್ನ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು ಪರಿಷತ್ತಿನ ಅಧ್ಯಕ್ಷರಾದ ಡಾ. ರವಿಕುಮಾರ್ ಎಜೆ ಮಾತನಾಡುತ್ತಾ ಶಾಲೆಯಲ್ಲಿ ಶಿಕ್ಷಕರು ಪಾಠದ ಜೊತೆಗೆ ಗಿಡ ಮರ ವನ ಕಾಡು ಬಗ್ಗೆ ತಿಳಿಸುತ್ತಾ ಹೋದರೆ ಮಕ್ಕಳಲ್ಲಿ ಆಸಕ್ತಿ ಬರುತ್ತದೆ ಹಾಗು ಶಾಲೆಯಲ್ಲಿ ಗಿಡಮರಗಳು ಹೆಚ್ಚಿದಷ್ಟು ಮಕ್ಕಳಿಗೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಡಾ.ಲಕ್ಷ್ಮಿಕಾಂತ್ ಪರಿಸರಧಿಕಾರಿಗಳು ಮಾತನಾಡುತ್ತಾ ಹಸಿರು ಇದ್ದಷ್ಟು ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಣ್ಣು ಗಾಳಿ ನೀರು ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ. ಎಂದು ತಿಳಿಸಿದರು. ಪ್ರತಿಯೊಬ್ಬ ಮಕ್ಕಳು ಗಿಡಗಳನ್ನ ಮನೆಗಳಲ್ಲಿ ನೆಡಬೇಕೆಂದು ಹೇಳಿದರು ಶ್ರೀ ಟಿ.ಏಕಂತಪ್ಪ ಮಾತನಾಡಿ ಮಕ್ಕಳು ಓದುವುದರ ಜೊತೆಯಲ್ಲಿ ಗಿಡ ವನ ಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು ಶಾಲಾ ಪ್ರಾಂಶುಪಾಲರಾದ ವೀರಭದ್ರ ನಾಯಕ್ ಹಾಗೂ ಶ್ರೀ ಎಂ.ಬಿ. ಇದಾಯತುಲ್ಲಾ ಅರಣ್ಯ ಇಲಾಖೆ ಇವರು ಕೂಡ ಇದ್ದರು ಪದಾಧಿಕಾರಿಗಳಾದ ಎಂ ಕುಮಾರ್, ಸುರೇಶ್ ರಾವ್ ಬೀರಪ್ಪ ಹಾಗೂ ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.