ದಾನಿಗಳ ದಾವಣಗೆರೆಗೆ ‘ನಮ್ಮ ದಾವಣಗೆರೆ’ ತಂಡದಿಂದ ಮಾನವೀಯತೆ ಕಾರ್ಯ
ದಾವಣಗೆರೆ: ದಾನಿಗಳ ಊರೆಂದ ಬಿಂಬಿತವಾಗಿರುವ ದಾವಣಗೆರೆ ಆ ಹೊಗಳಿಕೆಗೂ ಕೂಡ ಅನ್ವರ್ಥ.
ಈಗ ಇದಕ್ಕೊಂದು ಉದಾಹರಣೆಯೆಂಬಂತೆ ಇಲ್ಲಿನ ಪ್ರಾಣಿ ಪ್ರಿಯರು ವಾರಾಂತ್ಯದ ಲಾಕ್ಡೌನ್ ಸಂದರ್ಭದಲ್ಲಿ ಬೀದಿಯಲ್ಲಿರುವ ಬಿಡಾಡಿ ಪ್ರಾಣಿಗಳಿಗೂ ಸಹ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಈ ತಂಡದ ನಾಯಕರಾದ ರೋಹಿತ್ ಜೈನ್ ನೇತೃತ್ವದಲ್ಲಿ ಆನಂದ್ ಜೈನ್, ಬಾಬ ಸುಬ್ರಹ್ಮಣ್ಯ, ಅಕ್ಷಯ್, ರಾಕೇಶ್, ಸುನೀಲ್ ಬಾಗೇವಾಡಿ ತಂಡವು ಲಾಕ್ಡೌನ್ ನಿಂದ ಆಹಾರವಿಲ್ಲದೆ ನಲುಗುವ ಬೀದಿ ನಾಯಿಗಳು, ದನಗಳಿಗೆ ಆಹಾರ ಒದಗಿಸಿ ಮಾನವೀಯತೆ ತೋರಿದ್ದಾರೆ.