ಜನಮಿಡಿತ ಪತ್ರಿಕೆಯ ಸಂಪಾದಕ ಜಿ ಎಂ ಆರ್ ಆರಾಧ್ಯ ರಿಗೆ ಮಾತೃವಿಯೋಗ

ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಗಿರಿಯಾಪುರ ವಾಸಿಗಳಾದ ದಿ|| ಜಿ ಎಂ ಮರುಳಯ್ಯ ನವರ ಧರ್ಮಪತ್ನಿ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅದ್ಯಕ್ಷರು ಹಾಗೂ ” ಜನಮಿಡಿತ “ಸಂಪಾದಕರಾದ ಜಿ.ಎಂ.ಆರ್. ಆರಾಧ್ಯ ಮತ್ತು ಅವರ
ಸಹೋದರ ಪ್ರೌಢಶಾಲಾ ಶಿಕ್ಷಕ ಜಿ.ಎಂ.ಯತೀಶ್ ಅವರ ತಾಯಿ ಶ್ರೀಮತಿ ಸರ್ವಮಂಗಳಮ್ಮ (79) ಅವರು ದಿನಾಂಕ ಜೂನ್ 16 ರ ಸಾಯಂಕಾಲ ಕಡೂರಿನಲ್ಲಿ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತ ಸರ್ವಮಂಗಳಮ್ಮ ನವರಿಗೆ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ದಿನಂಕ ಜೂನ್ 17 ರಂದು ಕಡೂರಿನಲ್ಲಿ ನೆರವೇರಿಸಲಾಗುವುದು ಎಂದು ಪುತ್ರ ಜಿ ಎಂ ಆರ್ ಆರಾಧ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!