ಜೂನ್ 21 ರಿಂದ ದಾವಣಗೆರೆಯಲ್ಲಿ ಲಸಿಕಾ ಮೇಳ – ಡಿ.ಸಿ. ಮಹಾಂತೇಶ್ ಬೀಳಗಿ
![](https://garudavoice.com/wp-content/uploads/2021/06/june21_vaccination_festival_in_Davanagere_dc1.jpg)
Vaccination :ದಾವಣಗೆರೆ: ಪ್ರಂಟ್ ಲೈನ್ ವರ್ಕರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಜೂನ್ 21 ರ ಸೋಮವಾರದಿಂದ ಲಸಿಕೆ ನೀಡುವ ಮೂಲಕ ಲಸಿಕೆ ಮೇಳವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಲಸಿಕಾ ಮೇಳದ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು 45 ವರ್ಷ ಮೇಲ್ಪಟ್ಟ 2ನೇ ಡೋಸ್ ಪಡೆಯಲು ಅರ್ಹರಿರುವ ಎಲ್ಲರಿಗೂ ಲಸಿಕೆ ನೀಡಬೇಕು ಹಾಗೂ 45 ವರ್ಷ ಮೇಲ್ಪಟ್ಟ ಮೊದಲ ಡೋಸ್ ಪಡೆಯದವರಿಗೂ ಲಸಿಕೆ ನೀಡುವುದು ಹಾಗೂ ಪ್ರಂಟ್ ಲೈನ್ ವರ್ಕರ್ಸ್ಲ ಗಳು ಲಸಿಕೆ ನೀಡಬೇಕು. ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಮೊದಲ ಡೋಸ್ ಪಡೆದಿರುವವರಿಗೆ ಪೋನ್ ಮುಖಾಂತರ ಅಥವ ಎಸ್. ಎಂ.ಎಸ್ ಕಳುಹಿಸುವ ಮೂಲಕ ಲಸಿಕೆ ಪಡೆಯಲು ಪ್ರೇರೇಪಿಸಬೇಕು ಹಾಗೂ ಪಂಚಾಯತ್,ರೆವಿನ್ಯೂ ಸಿಬ್ಬಂದಿ ಲಸಿಕಾಕರಣ ಯಶಸ್ವಿಯಾಗಲು ಜಾಗೃತಿ ಮೂಡಿಸಬೇಕು ಎಂದರು
ಲಸಿಕಾ ಮೇಳದಲ್ಲಿ ಆದ್ಯತಾ ವಲಯದ ಎಲ್ಲರಿಗೂ ಲಸಿಕೆ ನೀಡಬೇಕು ಮತ್ತು ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡುವ ಮೂಲಕ ಸೋಂಕಿತರನ್ನು ಬೇಗ ಪತ್ತೆ ಹಚ್ಚುವ ಕೆಲಸ ಆಗಬೇಕು 3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗಲುವ ಸಂಭವವಿದ್ಧು ದುರ್ಬಲ ವರ್ಗದ ಮಕ್ಕಳ ಪೋಷಕರಿಗೂ ಆದ್ಯತೆಯ ಮೇಲೆ ಲಸಿಕೆ ನೀಡಬೇಕು,ಡೆತ್ ಪ್ಯಾಕೆಟ್ ಹೆಚ್ಚು ಕಂಡು ಬರುತ್ತಿರುವ ಕಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಟೆಸ್ಟ್ ಮಾಡಬೇಕು ಎಂದರು
ಸಭೆಯಲ್ಲಿ ಸಿಇಓ ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ,ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿ.ಹೆಚ್.ಓ.ನಾಗರಾಜ್,ಆರ್.ಸಿ.ಹೆಚ್.ಅಧಿಕಾರಿ ಡಾ.ಮೀನಾಕ್ಷಿ,ಡಾ.ನಟರಾಜ್,ಡಾ.ರೇಣುಕಾರಾಧ್ಯ ,ತಾಲೂಕು ಟಿ.ಹೆಚ್.ಓ.ಗಳು ಉಪಸ್ಥಿತರಿದ್ದರು.