millets; ಸಿರಿಧಾನ್ಯ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ನೂರು ವರ್ಷ ಬದುಕಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ .ಎಂ.ವಿ

ದಾವಣಗೆರೆ: millets  ಸಾವಿರಾರು ವರ್ಷಗಳಿಂದ ಪಾರಂಪರಿಕವಾಗಿ ನಮ್ಮ ಪೂರ್ವಜರು ಸಿರಿಧಾನ್ಯ ಸೇವನೆ ಮಾಡಿಕೊಂಡು ಬಂದು ಗಟ್ಟಿಮುಟ್ಟಾಗಿ ಹಾಗೂ ದೀರ್ಘಾಯುಷ್ಯಾದಿಂದ ಬದುಕುತ್ತಿದ್ದಾರೆ. ಆರೋಗ್ಯ ಕಾಪಾಡಲು ಜೋಳ, ರಾಗಿ, ನವಣೆ, ಸಜ್ಜೆ, ಊದಲು ಮುಂತಾದ ಸಿರಿಧಾನ್ಯಗಳನ್ನು ಬಳಸಿ ಎಂದು  ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ನಗರದ ಜಯದೇವ ವೃತ್ತದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ , ಕೃಷಿಕ ಸಮಾಜದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷಚರಣೆ ಪ್ರಯುಕ್ತ ನಡೆದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸಿರಿಧಾನ್ಯದಲ್ಲಿ ಕ್ಯಾಲ್ಸಿಯಂ, ಮತ್ತು ಎಲ್ಲಾ ರೀತಿಯ ವಿಟಮಿನ್‍ಗಳಿವೆ. ಒಬ್ಬ ಮನುಷ್ಯನ ಬಲವರ್ಧನೆಗೆ ಬೇಕಾಗಿರುವಂತಹ ಎಲ್ಲಾ ಪೋಷಕಾಂಶಗಳು ಸಿರಿಧಾನ್ಯದಲ್ಲಿವೆ.  ಯಾರು ಸಿರಿಧಾನ್ಯ ಸೇವನೆ, ಮಾಡುತ್ತಾರೆಯೋ ಅವರು ನೂರು ವರ್ಷಗಳ ಕಾಲ ದೀರ್ಘಾಯುಷ್ಯದಿಂದ ಬದುಕಿರುವಂತಹ ಉದಾಹರಣೆಗಳಿವೆ. ನಮ್ಮ ಜೀವನ ಪದ್ದತಿ ಆಧಾರಿಸಿದ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿಪಿ, ಹೃದಯ ತೊಂದರೆ, ಕಿಡ್ನಿ ಸಮಸ್ಯೆ ಇವುಗಳು ಸಿರಿಧಾನ್ಯಗಳನ್ನು ಸೇವನೆಯಿಂದ  ಅತೋಟಿಯಲ್ಲಿ ಇಟ್ಟು ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ನಮ್ಮ ಅಂತರಾಷ್ಟ್ರೀಯ ಆಹಾರ ಸಂಸ್ಥೆಯಿಂದ ರಾಜ್ಯ ಸರ್ಕಾರದ ಮನವಿ ಮೇರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಗುರುತಿಸಿ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಕೂಡಾ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ತರಲು ಜಾಗೃತಿಗಾಗಿ ಅನೇಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲಾ ಜಿಲ್ಲೆಯಲ್ಲೂ ಸಿರಿಧಾನ್ಯ ಕಾರ್ಯಕ್ರಮ ನಡೆಯುತ್ತದೆ ಕಾರ್ಯಕ್ರಮ ಮಾಡಿದರೆ ಸಲಾದು ಒಂದಲ್ಲಾ ಒಂದು ರೀತಿಯಲ್ಲಿ ಸಿರಿಧಾನ್ಯ ಸೇವಿಸಿ  ದೀರ್ಘಾಯುಷ್ಯರಾಗಿ, ಪರಿಪೂರ್ಣ ಆರೋಗ್ಯವಂತರಾಗಿ ಬದುಕೋಣ ಎಂದು ಕರೆ ನೀಡಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಇಟ್ನಾಳ್ ಮಾತನಾಡಿ, ಹಿಂದಿನ ದಿನಗಳಲ್ಲಿ ಒಣ ಪ್ರದೇಶಗಳಲ್ಲಿ ಕಡಿಮೆ ನೀರು ಇರುವಂತಹ ಸ್ಥಳಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಆಗ ಈ ಬೆಳೆಯನ್ನು ಬಡವರು ಬೆಳೆಯುವ ಬೆಳೆ ಎಂದು ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಸೇರಿದಂತೆ ಇತರೆ ಖಾಯಿಲೆಗಳಿಂದ ನರಳುತ್ತಿದ್ದಾರೆ. ಅಂತಹ ಖಾಯಿಲೆಗಳನ್ನು ತಡೆಯಬೇಕೆಂದರೆ ಸಿರಿಧಾನ್ಯಗಳನ್ನು ನಿತ್ಯ ಆಹಾರ ಕ್ರಮಗಳಲ್ಲಿ ಬಳಸಬೇಕು. ಸಿರಿಧಾನ್ಯವು ಅಪೌಷ್ಠಿಕತೆಯಿಂದ ಬಳಲುವವರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಸಿರಿಧಾನ್ಯ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಮತ್ತೆ ನಾವುಗಳು ಸಿರಿಧಾನ್ಯಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರವನ್ನು ಬಳಸದೇ ಇಂತಹ ಬೆಳೆಗಳನ್ನು ಬೆಳೆಯುವುದರಿಂದ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ, ಇದು ಇನ್ನೂ ಹೆಚ್ಚು ಪ್ರದೇಶದಲ್ಲಿ ಬೆಳೆಯಬೇಕು. ಈ ಸಿರಿಧಾನ್ಯ ಕುರಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಸಿರಿಧಾನ್ಯ ಮೇಳಗಳನ್ನು ಆಯೋಜಿಸಲಾಗಿದೆ ಎಂದರು.

ಜಯದೇವ ಸರ್ಕಲ್‍ನಿಂದ ಸಿರಿಧಾನ್ಯ ನಡಿಗೆ ಪ್ರಾರಂಭಗೊಂಡು ಆರ್.ಎಚ್.ಕಲ್ಯಾಣ ಮಂಟಪ, ಹಳೇ ಪಿ.ಬಿ.ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ರಾಮ್ ಅಂಡ್ ಕೋ ಸರ್ಕಲ್, ಚರ್ಚ್ ರಸ್ತೆ ಮಾರ್ಗವಾಗಿ ಗುಂಡಿ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಸಲ್ ಶ್ರೀನಿವಾಸ್ ಶೆಟ್ಟಿ ಪಾರ್ಕ್ ರಸ್ತೆ ಮುಖಾಂತರ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮುಕ್ತಾಯವಾಯಿತು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!