Municipality; ಚನ್ನಗಿರಿ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಕೃಷ್ಣ ಡಿ ಕಟ್ಟಿಮನಿ ನೇಮಕ

ಚನ್ನಗಿರಿ, ಅ, 17: ಚನ್ನಗಿರಿ ಪುರಸಭೆಯ (Municipality) ನೂತನ ಮುಖ್ಯಾಧಿಕಾರಿಯಾಗಿ ಕೃಷ್ಣ ಡಿ ಕಟ್ಟಿಮನಿ ಅಧಿಕಾರ ಸ್ವೀಕರಿಸಿದರು. ಪ್ರಭಾರ ಮುಖ್ಯಾಧಿಕಾರಿ ವೈ.ಎನ್. ಆರಾಧ್ಯ ಅಧಿಕಾರ ಹಸ್ತಾಂತರಿಸಿದರು. ಪುರಸಭೆಯ ಅಧ್ಯಕ್ಷೆ ಲಕ್ಷ್ಮೀದೇವಿ ನರಸಿಂಹಮೂರ್ತಿ ಸ್ವಾಗತಕೋರಿದರು.

ಕಳೆದ ಎರಡು ತಿಂಗಳ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಾಧಿಕಾರಿ ಪರಮೇಶ್ ದೊಡ್ಡಬಳ್ಳಾಪುರಕ್ಕೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ವೈ.ಎನ್.ಆರಾಧ್ಯ ಪ್ರಭಾರ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

protest; ಬಸವಣ್ಣನವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿರುವುದಕ್ಕೆ ಖಂಡನೆ, ಪ್ರತಿಭಟನೆ

ಎರಡು ತಿಂಗಳ ನಂತರ ಸರಕಾರ ಮುಖ್ಯಾಧಿಕಾರಿಯನ್ನು ನಿಯೋಜಿಸಿದ್ದು ಕೃಷ್ಣ ಡಿ ಕಟ್ಟಿಮನಿಯವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರೆರೂ ಪ.ಪಂ.ಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಚನ್ನಗಿರಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ , ವಾಲ್ಮೀಕಿ ವೃತ್ತದ ಸಮಸ್ಯೆ ಸೇರಿದಂತೆ ಸಕಷ್ಟು ಸಮಸ್ಯೆಗಳು ಮುಖ್ಯಾಧಿಕಾರಿಯ ಎದುರು ಇವೆ.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಜರೀನಾಬಿ, ಸದಸ್ಯರಾದ ನಿಂಗಪ್ಪ, ಅಮೀರ್‌ಆಹಮದ್.ಸಿ.ಆರ್. ಅಣ್ಣಯ್ಯ ಪುರಸಭೆಯ ಅರೋಗ್ಯಾಧಿಕಾರಿ ಶಿವರುದ್ರಪ್ಪ,ಇಂಜನಿಯರ್ ಹಾಲೇಶಪ್ಪ, ಕಂದಾಯ ಅಧಿಕಾರಿ ಮಂಜುನಾಥ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ,ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!