ಪ್ರಜಾಕಾರ್ಮಿಕನಿಂದ ಚರಂಡಿ ಸ್ವಚ್ಚತೆಗೆ ಪೋಲಿಂಗ್! ಚರಂಡಿ ಸ್ವಚ್ಚತೆಗೆ ಎಷ್ಟು ಜನರ ಸಮ್ಮತಿ ಇದೆ ಗೊತ್ತಾ?

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ: ಜನರೇ ಚರಂಡಿ ಸ್ವಚ್ಚತೆ ಮಾಡಿ ಜನರಿಗೆ ಮಾಡಿದ ಕೆಲಸಕ್ಕೆ ಗೌರವಧನದ ರೂಪದಲ್ಲಿ ಹಣ ನೀಡುವ ಸಲುವಾಗಿ ಕಾರಿಗನೂರು ಗ್ರಾಮ ಪಂಚಾಯ್ತಿಯ ಸದಸ್ಯ ಚೇತನ್ ಕುಮಾರ್ ಆರಂಭಿಸಿದ್ದ ನನ್ನ ಮನೆ ನನ್ನ ಸ್ವಚ್ಚತೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಅರೇಹಳ್ಳಿ ಗ್ರಾಮದ 4ನೇ ವಾರ್ಡಿನ ಒಟ್ಟು 93 ಮನೆಗಳ ಸದಸ್ಯರಿಂದ ಜನಾಭಿಪ್ರಾಯ ಪಡೆದಿದ್ದಾರೆ. ಚರಂಡಿ ಸ್ವಚ್ಚತೆಗೆ ಸಂಬ0ಧಿಸಿದ0ತೆ ತಮ್ಮ ತಮ್ಮ ಮನೆ ಮುಂದಿನ ಚರಂಡಿಯನ್ನು ತಾವೇ ಸ್ವಚ್ಚ ಮಾಡುತ್ತಿರೋ ಅಥವಾ ಕಂಟ್ರಾಕ್ಟರ್ ಗಳಿಗೆ ನೀಡಿ ಚರಂಡಿ ಸ್ವಚ್ಚತೆ ಕಾರ್ಯಕೈಗೊಳ್ಳುವುದು ಸೂಕ್ತವೋ ಎಂಬ ವಿಷಯಕ್ಕೆ ಪೋಲಿಂಗ್ ಮಾಡಲಾಗಿದ್ದು, ಹೆಚ್ಚಿನ ಜನ ನಾವೇ ನಮ್ಮ ಮನೆ ಮುಂದಿನ ಚರಂಡಿ ಸ್ವಚ್ಚಗೊಳಿಸುತ್ತೇವೆಂದು ಜನಾಭಿಪ್ರಾಯ ಮಂಡಿಸಿದ್ದಾರೆ.

ಈ ಯೋಜನೆಗೆ ಒಳಪಡುವ ಒಟ್ಟು 93 ಮನೆಗಳಿಗೆ ಪೋಲಿಂಗ್ ನಡೆದಿದ್ದು, ಇದರಲ್ಲಿ 7 ಮನೆಗಳು ಖಾಲಿ ಇದ್ದು, ಬೇಡ ಎಂದು 2, ಕಂಟ್ರಾಕ್ಟರ್‌ಗೆ ನೀಡಿ ಎಂದು 11 ಮತ್ತು ನಾವೇ ಚರಂಡಿ ಸ್ವಚ್ಚಗೊಳಿಸುತ್ತೇವೆ ಎಂದು 73 ಮನೆಗಳು ಜನಾಭಿಪ್ರಾಯ ಮಂಡಿಸಿವೆ. ಜನರಲ್ಲಿ ಸ್ವಚ್ಚತೆಯ ಅರಿವು, ಸಾರ್ವಜನಿಕ ಆಸ್ತಿಗಳು ತಮ್ಮ ಆಸ್ತಿಗಳೆಂಬ ಭಾವನೆ ಹಾಗೂ ಜನರ ತೆರಿಗೆ ಹಣ ಜನರಿಗೆ ತಲುಪಿಸುವಂತಹ ಉದ್ದೇಶದಿಂದ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್ ಕುಮಾರ್ ನನ್ನ ಮನೆ ನನ್ನ ಸ್ವಚ್ಚತೆ ಎಂಬ ಘೋಷವಾಕ್ಯದಡಿಯಲ್ಲಿ ಈ ಯೋಜನೆಯ ಸದುಪಯೋಗಕ್ಕೆ ಮುಂದಡಿ ಇಟ್ಟಿದ್ದರು. ಈ ಹಿಂದೆ ಅಂದರೆ 2021-22ನೇ ಸಾಲಿನಲ್ಲಿ ಅರೇಹಳ್ಳಿ ಗ್ರಾಮದ ಜನರು ಈ ಯೋಜನೆಯ ಸದುಪಯೋಗಪಡಿಸಿಕೊಂಡು ತಮ್ಮ ಮನೆ ಮುಂದಿನ ಚರಂಡಿಯನ್ನು ಸ್ವಚ್ಚ ಮಾಡಿ ತಾವೇ ಹಣ ಪಡೆದಿದ್ದರು.

ಇದೀಗ 2022-23ನೇ ಸಾಲಿನಲ್ಲಿ ಕಾರಿಗನೂರು ಗ್ರಾಮ ಪಂಚಾಯ್ತಿಯಿAದ 15ನೇ ಹಣಕಾಸು ಯೋಜನೆಯಲ್ಲಿ ಚರಂಡಿ ಸ್ವಚ್ಚತೆಗೆ ಮೀಸಲಿಟ್ಟ 2 ಲಕ್ಷ ಹಣದಲ್ಲಿ ಅರೇಹಳ್ಳಿ ಗ್ರಾಮದ 4ನೇ ವಾರ್ಡಿಗೆ 75 ಸಾವಿರ ರೂ. ಬಂದಿದ್ದು, ಜನರಿಂದಲೇ ಚರಂಡಿ ಸ್ವಚ್ಚತೆ ಮಾಡುವ ಸಲುವಾಗಿ ಪೋಲಿಂಗ್ ಮೂಲಕ ಅಭಿಪ್ರಾಯ ಪಡೆಯಲಾಗಿದೆ.
2022-23ನೇ ಸಾಲಿನಲ್ಲಿ ವಾರ್ಷಿಕವಾಗಿ 75 ಸಾವಿರ ರೂ. ಅರೇಹಳ್ಳಿ ಗ್ರಾಮದ 4ನೇ ವಾರ್ಡಿಗೆ ಮೀಸಲಿಟ್ಟಿದ್ದು, ಈ ಹಣದಲ್ಲಿ ಜನರು ತಮ್ಮ ಮನೆ ಮುಂದಿನ ಚರಂಡಿಯನ್ನು ಒಟ್ಟು ಐದು ಬಾರಿ ಸ್ವಚ್ಚಗೊಳಿಸಬೇಕು. ಜೂನ್ 19ರಿಂದ ಆರಂಭವಾಗುವ ಚರಂಡಿ ಸ್ವಚ್ಚತೆ ಕೆಲಸ ನಂತರ ಆಗಸ್ಟ್ 14ಕ್ಕೆ, ಅಕ್ಟೋಬರ್ 16ಕ್ಕೆ, ಡಿಸೆಂಬರ್ 25ಕ್ಕೆ ಮತ್ತು 2023ರ ಮಾರ್ಚ್ 26ಕ್ಕೊಮ್ಮೆ ತಮ್ಮ ಮನೆ ಮುಂದಿನ ಚರಂಡಿಯನ್ನು ತಾವೇ ಸ್ವಚ್ಚಗೊಳಿಸಬೇಕು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!